23 C
ಪುತ್ತೂರು, ಬೆಳ್ತಂಗಡಿ
June 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಶೈಕ್ಷಣಿಕ ಪ್ರಗತಿ- ಮಿಂಚಿನ ಸಂಚಾರ ಇಲಾಖಾ ತಂಡ ಭೇಟಿ

ಪುಂಜಾಲಕಟ್ಟೆ :ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಜ್ಞಾನೇಶ್, ದ.ಕ ಜಿಲ್ಲಾ ಪ್ರಧಾನ ಮಂತ್ರಿ ಪೋಷಣ ಅಭಿಯಾನದ ಶಿಕ್ಷಣಾಧಿಕಾರಿ, ಡಯಟ್ ಮಂಗಳೂರಿನ ಹಿರಿಯ ಉಪನ್ಯಾಸಕರಾದ ಶಶಿಧರ್ ಜಿ. ಎಸ್ ಹಾಗೂ ಶ್ರೀಮತಿ ಫಾತಿಮಾ ಬಿ ಇವರ ತಂಡ 2025 -26 ಸಾಲಿನ ಶೈಕ್ಷಣಿಕ ಪ್ರಗತಿ ಚಿಂತನೆಗಾಗಿ ಮಿಂಚಿನ ಸಂಚಾರ ಕಾರ್ಯಕ್ರಮದಡಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪೂಂಜಾಲಕಟ್ಟೆಗೆ ಭೇಟಿ ನೀಡಿದರು.

ಅವರು ಶಾಲಾ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಹಾಜರಾತಿ ಮತ್ತು ಕಳೆದ ವರ್ಷದ ಹತ್ತನೇ ತರಗತಿಯ ಫಲಿತಾಂಶದ ವಿಶ್ಲೇಷಣೆ, ಶಾಲೆಗೆ ಮಂಜೂರಾದ ಹುದ್ದೆಗಳ ಬಗ್ಗೆ, ದಾಖಲಾತಿ ಆಂದೋಲನದ ಪ್ರಗತಿಯ ವಿಚಾರ, ಶಾಲಾ ವೇಳಾಪಟ್ಟಿ ಮತ್ತು ಕ್ರಿಯಾಯೋಜನೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಭೆಯ ಬಗ್ಗೆ, ಪೋಷಕರ ಮತ್ತು ತಾಯಂದಿರ ಸಭೆಯ ನಿರ್ವಹಣೆಯ ಕುರಿತು, ಶಾಲಾ ಪರಿಸರದ ಕುರಿತು, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹದಾಯಕ ಯೋಜನೆಗಳಾದ ಸಮವಸ್ತ್ರ, ಪಠ್ಯಪುಸ್ತಕ, ಅಕ್ಷರ ದಾಸೋಹದ ಕುರಿತು, ಗ್ರಂಥಾಲಯ, ಪ್ರಯೋಗಾಲಯ, ವಾಚನಾಲಯ, ಇ- ಕಲಿಕಾ ಕೇಂದ್ರ, ಶೈಕ್ಷಣಿಕ ಬಲವರ್ಧನೆ, ಶಾಲಾ ಶೈಕ್ಷಣಿಕ ಸಾಧನೆ, ಶೌಚಾಲಯದ ಲಭ್ಯತೆ, ಕುಡಿಯುವ ನೀರಿನ ಲಭ್ಯತೆ, ಆಟದ ಮೈದಾನದ ಲಭ್ಯತೆ, ಶಾಲಾ ಕೈತೋಟ, ಶಾಲಾ ಕಟ್ಟಡ ನಿರ್ವಹಣೆ, ನನ್ನ ಶಾಲೆ ನಮ್ಮ ಜವಾಬ್ದಾರಿ ಕುರಿತು ವಿವರವಾಗಿ ಪರಿಶೀಲಿಸಿ ಸೂಕ್ತ ಸಲಹೆ ,ಸೂಚನೆ ಹಾಗೂ ಮಾರ್ಗದರ್ಶನವನ್ನು ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಉದಯಕುಮಾರ್ ಬಿ ಅಧಿಕಾರಿಗಳನ್ನು ಸ್ವಾಗತಿಸಿ, ಶಿಕ್ಷಕ ಬಳಗ ಮತ್ತು ಸಿಬ್ಬಂದಿಗಳು ಬರಮಾಡಿಕೊಂಡು, ಸಹ ಶಿಕ್ಷಕ ಧರಣೇಂದ್ರ ಕೆ ಧನ್ಯವಾದ ಸಲ್ಲಿಸಿದರು.

Related posts

ಹಾಡುಹಗಲೇ ಚರ್ಚ್ ರೋಡ್ ಬಳಿ ನಿಲ್ಲಿಸಿದ್ದ ಬೈಕ್ ನಾಪತ್ತೆ

Suddi Udaya

ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿದ ಸ್ಟೀಲ್ ಪಾತ್ರೆ ಒಳಗೆ ವ್ಯಕ್ತಿಯ ಶವ ಪತ್ತೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಸೆ.19: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಶ್ರೀ  ಗಣೇಶ ಚತುರ್ಥಿ ಪ್ರಯುಕ್ತ 108 ತೆಂಗಿನ ಕಾಯಿ ಗಣಹೋಮ ಹಾಗೂ ರಂಗಪೂಜೆ

Suddi Udaya

ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ: ಎನ್ ಎಸ್ ಎಸ್ ಮತ್ತು ಯುವಜನತೆ ವಿಶೇಷ ಉಪನ್ಯಾಸ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚಾ, ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ನೆರಿಯ ಬಾಂಜಾರುಮಲೆಯ ಅರಣ್ಯವಾಸಿ ಜನರೊಂದಿಗೆ ಶಕ್ತಿವಂದನಾ ಕಾರ್ಯಕ್ರಮ

Suddi Udaya

ಬಳಂಜದಲ್ಲಿ ಟಿಪ್ಪರ್ ಪತ್ತೆ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!