ಮಚ್ಚಿನ: ಸರಕಾರಿ ಪ್ರೌಢಶಾಲೆಯಲ್ಲಿ 9ಮತ್ತು 10ನೇ ತರಗತಿ ಪೋಷಕರ ಸಭೆಯು ಜೂ.4ರಂದು ನಡೆಸಲಾಯಿತು.
9ನೇ ತರಗತಿ ಸಭೆಯನ್ನು ತರಗತಿ ಶಿಕ್ಷಕರಾದ ದುರ್ಗಾಪ್ರಸಾದ್ ಜಿ. ಮತ್ತು ಶಿವಾಯಿನಿ ಶೇಟ್ ನಿರ್ವಹಿಸಿದರು. 10ನೇ ತರಗತಿ ಪೋಷಕರ ಸಭೆಯನ್ನು ತರಗತಿ ಶಿಕ್ಷಕರಾದ ವೆಂಕಪ್ಪ ಬಿ ಮತ್ತು ಸುರೇಶ್ ಎಂ. ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರು ಭಾಗವಹಿಸಿದ್ದರು. ದಾನಿಗಳಾದ ವಿಠಲ ಶೆಟ್ಟಿ ಮೂಡಾಯೂರು ಇವರು ನೀಡಿದ ಸುಮಾರು ರೂ.20,000 ಮೌಲ್ಯದ ಪುಸ್ತಕಗಳನ್ನು ಮಕ್ಕಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.