ಮದ್ದಡ್ಕ: ಮದ್ದಡ್ಕದಲ್ಲಿ ಅಬಕಾರಿ ಉಪ ಅಧೀಕ್ಷಕ ಸಂತೋಷ ಮೋಡಗಿ ನೇತೃತ್ವದಲ್ಲಿ ಮನೆಯೊಂದರ ಮೇಲೆ ಅಬಕಾರಿ ಅಧಿಕಾರಿ ದಾಳಿ ಮಾಡಲಾಗಿ, ಮನೆಯಲ್ಲಿ 2 ಪ್ಲಾಸ್ಟಿಕ್ ಡಬ್ಬದಲ್ಲಿ 250 ಗ್ರಾಂ ಗಾಂಜಾ ದೊರಕಿದ್ದು ಹಾಗೂ 2 ಮೊಬೈಲ್ಗಳನ್ನು ಜೂ.3ರಂದು ಜಪ್ತುಪಡಿಸಲಾಗಿದೆ.
ಪ್ರಕರಣದ ಆರೋಪಿತನಾದ ಮಹಮ್ಮದ್ ರಫೀಕ್ ಎಂಬುವನು ಪರಾರಿ ಆಗಿರುತ್ತಾನೆ, ಆರೋಪಿಯ ವಿರುದ್ಧ ಎನ್ಡಿಪಿಎಸ್ ಕಾಯ್ದೆ 1985 ರ ಕಲಂ 8C, 20(2)a ಹಾಗೂ 25 ರನ್ವಯ ಪ್ರಕರಣ ದಾಖಲಿಸಲಾಗಿರುತ್ತದೆ.
ದಾಳಿಯಲ್ಲಿ ಬಂಟ್ವಾಳ ಉಪ ವಿಭಾಗದ ನಿರೀಕ್ಷಕ ನವೀನ್ ಕುಮಾರ್, ಉಪನಿರೀಕ್ಷಕ ಗಿರೀಧರ ಮಜಕರ್ ಹಾಗೂ ಬೆಳ್ತಂಗಡಿ ವಲಯ ಕಚೇರಿಯ ನಿರೀಕ್ಷಕ ಲಕ್ಷ್ಮಣ ಉಪ್ಪಾರ, ಉಪ ನಿರೀಕ್ಷಕ ಸಯ್ಯದ್ ಶಬೀರ್ ಹಾಗೂ ಪೇದೆಗಳಾದ ಶ್ರೀನಿವಾಸ್, ಕೃಷ್ಣ ಅಗಸರ, ಭೋಜ, ವಿನೊಯ್ ವಾಹನ ಚಾಲಕ ಕೇಶವ್ ನಾಯ್ಕ, ನವೀನ್ ಭಾಗವಹಿಸಿರುತ್ತಾರೆ.
ಸದ್ರಿ ಪ್ರಕರಣವನ್ನು ನವೀನ ಕುಮಾರ್ ನಿರೀಕ್ಷಕರು ಬಂಟ್ವಾಳ ಉಪವಿಭಾಗ ದಾಖಲಿಸಿಕೊಂಡಿದ್ದು, ಸದ್ರಿ ಆರೋಪಿಯು ಹಳೆಯ ಆರೋಪಿಯಾಗಿದ್ದು ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುತ್ತಾನೆ.