25.1 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಮಡಂತ್ಯಾರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದಿಂದ ಮಳೆಗಾಲದ ಠೇವಣಿ ಹಾಗೂ ಚಿನ್ನಾಭರಣ ಸಾಲಕ್ಕೆ ಹೊಸ ಆಫರ್ ಬಿಡುಗಡೆಯ ಕರಪತ್ರ ಬಿಡುಗಡೆ

ಮಡಂತ್ಯಾರು:ರಾಜ್ಯ ಸರ್ಕಾರದ ಪಾಲು ಬಂಡವಾಳ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ. ಪುತ್ತೂರು ಇದರ ಮುಂಗಾರು ಹಂಗಾಮ ಎಂಬ ಮಳೆಗಾಲದ ಠೇವಣಿ ಹಾಗೂ ಚಿನ್ನಾಭರಣ ಸಾಲಕ್ಕೆ ಹೊಸ ಆಫರ್ ಬಿಡುಗಡೆಯ ಕರಪತ್ರ ಬಿಡುಗಡೆಯು ಜೂ.3 ರಂದು ಮಡಂತ್ಯಾರು ಶಾಖೆಯಲ್ಲಿ ನಡೆಯಿತು.

1ವರ್ಷದ ನಿರಖು ಠೇವಣಿಗೆ 10 % ಹಾಗೂ ಚಿನ್ನಾಭರಣ ಸಾಲಕ್ಕೆ ಪ್ರತಿ ಗ್ರಾಂ ಗೆ 7777/- ₹ 100/- ಕ್ಕೆ ಬಡ್ಡಿದರ 85 ಪೈಸೆ ಮಾತ್ರ, ಗರಿಷ್ಠ ಸಾಲ – ಕನಿಷ್ಠ ಬಡ್ಡಿ ದರ ಉದ್ದೇಶದ ಕರಪತ್ರದ ಬಿಡುಗಡೆ ಸಮಾರಂಭವು ನಡೆಯಿತು. ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರ ನಡುಬೊಟ್ಟುವಿನ ಆಡಳಿತ ಮೊಕ್ತೆರಸರರಾದ ವಿಶ್ವನಾಥ ಎನ್ ಕರಪತ್ರವನ್ನು ಬಿಡುಗಡೆ ಮಾಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಹಕರಾದ ಸೇಕ್ರೆಡ್ ಹಾರ್ಟ್ ಮೆಡಿಕಲ್ಸ್ ಮಾಲಿಕರಾದ ಜಾರ್ಜ್ ಅಂಡ್ರದೆ,ಶ್ರೀ ಹರಿ ಕಂಪ್ಯೂಟರ್ ನ ಮಾಲಕರಾದ ಪಿ ಹರೀಶ್ ಭಟ್, ರಮೇಶ್ ಮಾಸ್ಟರ್, ವಿಶ್ವನಾಥ ಕೊಡೈಲು ಲೋಕೇಶ್ ಬೋವುದಪಾಡಿ ಉಪಸ್ಥಿತರಿದ್ದರು.

ಗ್ರಾಹಕರಾದ ವಿಲಿಯಂ ವಾಲ್ಟರ್ ಮಸ್ಕರಸ್ ಇವರಿಗೆ ಠೇವಣಿ ಪತ್ರ ಮಡಂತ್ಯಾರು ಶಾಖಾ ವ್ಯವಸ್ಥಾಪಕ ರಕ್ಷಿತ್ ಕೆ ವಿತರಿಸಿದರು.ಸಿಬ್ಬಂದಿ ಅಭಿಜಿತ್ ಸಹಕರಿಸಿದರು.

Related posts

ಧರ್ಮಸ್ಥಳ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಆ. 13: ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ ಹಾಗೂ ಆರಂಬೋಡಿ ಯುವ ಬಂಟರ ಸಂಘದ ಆಶ್ರಯದಲ್ಲಿ ‘ಕೆಸರ್‌ಡ್ ಒಂಜಿ ದಿನ’

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಶವ ಪತ್ತೆ : ವಾರೀಸುದಾರರ ಪತ್ತೆಗಾಗಿ ಮನವಿ

Suddi Udaya

ಗೇರುಕಟ್ಟೆ : ಪರಪ್ಪು ಯೂನಿಟ್ ಕೆ.ಎಮ್.ಜೆ ಮತ್ತು ಎಸ್.ವೈ.ಎಸ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

Suddi Udaya

ಭಾರೀ ಮಳೆ ಹಿನ್ನಲೆ: ನಾಳೆ ದ.ಕ. ಜಿಲ್ಲಾದ್ಯಂತ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟ: ಉಜಿರೆ ಅನುಗ್ರಹ ಆಂ.ಮಾ. ಶಾಲಾ ವಿದ್ಯಾರ್ಥಿ ನಿಶಾನ್ ಹೆಚ್.ಪೂಜಾರಿ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!