ಅಳದಂಗಡಿ ಸರ್ಕಾರಿ ಪ್ರೌಢಶಾಲೆ/ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಜೂ.೫ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯ ಸದಾಶಿವ ಶೇಖರ, ಪ್ರಾಂಶುಪಾಲ ಸನ್ನಿ ಕೆ.ಎಂ., ಮುಖ್ಯ ಶಿಕ್ಷಕಿ ಶಾಂತಾ ಮರಿಯಾ ಸಾಲ್ದಾನಾ, ಶಿಕ್ಷಕ ವರ್ಗದವರು ಹಾಗೂ ಅಳದಂಗಡಿ ಶಾಖೆ ಹಾಗೂ ಅಳದಂಗಡಿ ವನ್ಯಜೀವಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿಗಳಾದ ಹರಿಪ್ರಸಾದ್, ಭರತ್ ಪೂಜಾರಿ, ಗಸ್ತು ಅರಣ್ಯ ಪಾಲಕರಾದ ಮಂಜುನಾಥ್, ಹೇಮಂತ್ ಕುಮಾರ್, ಸಂತೋಷ್ ಅರಣ್ಯ ವೀಕ್ಷಕರಾದ ಬಸವರಾಜ್, ಸಂದೇಶ್, ಸಜಿತ್ ಭಾಗವಹಿಸಿದ್ದರು.