ಬೆಳ್ತಂಗಡಿ: ಧರ್ಮಪ್ರಾಂತ್ಯದ ಪ್ರಾಂತೀಯ ಪಾಲನಾ ಸಮಿತಿಯ ವಾರ್ಷಿಕ ಮಹಾಸಭೆಯು ನಡೆಯಿತು. ವಿವಿಧ ಧರ್ಮಕೇಂದ್ರಗಳಿಂದ 82 ಪ್ರತಿನಿಧಿಗಳು ಭಾಗವಹಿಸುವ ಸಮ್ಮೇಳನದಲ್ಲಿ ಅತಿವಂದನೀಯ ಲಾರೆನ್ಸ್ ಮುಕ್ಕುಯಿಯವರು ಅಧ್ಯಕ್ಷರಾಗಿದ್ದರು.

ವಂದನೀಯ ಫಾ. ಜೋಸ್ರವರು “ದೇವರಲ್ಲಿನ ಪ್ರೀತಿ ಮತ್ತು ಭರವಸೆಯು ನಮ್ಮೆಲ್ಲರನ್ನೂ ಒಗ್ಗೂಡಿಸಲು ಕಾರಣವಾಗಲಿ” ಹಾರೈಸಿ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಜೆಸಿಂತಾರವರು ವಾರ್ಷಿಕ ವರದಿಯನ್ನು ಮಂಡಿಸಿದರು. ಧರ್ಮಪ್ರಾಂತ್ಯದ ಚಾನ್ಸೆಲರ್ ವಂದನೀಯ ಫಾ. ಲಾರೆನ್ಸ್ ಪೂನೂಲಿಲ್ ರವರು ಹಿಂದಿನ ವರ್ಷದ ವೃತ್ತಾನ್ಥಗಳನ್ನು ಓದಿ ಪ್ರಸ್ತುತಪಡಿಸಿದರು.

ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅತಿವಂದನೀಯ ಲಾರೆನ್ಸ್ರವರು ಧರ್ಮಪ್ರಾಂತ್ಯದ ಬೆಳವಣಿಗೆಯಲ್ಲಿ ಸಂತಸ ವ್ಯಕ್ತಪಡಿಸಿ ಎಲ್ಲರನ್ನು ಅಭಿನಂದಿಸಿದರು. ಧರ್ಮಪ್ರಾಂತ್ಯದ ಬೆಳವಣಿಗೆಯಲ್ಲಿ ಇನ್ನಷ್ಟು ಉತ್ಸುಕರಾಗಿ ಸಮಾಜದ ಸೇವೆಯಲ್ಲಿ ಕ್ರೈಸ್ತರು ತಮ್ಮನ್ನು ತೊಡಗಿಸಬೇಕು ಎಂದು ಸೂಚಿಸಿದರು.