24.4 C
ಪುತ್ತೂರು, ಬೆಳ್ತಂಗಡಿ
June 8, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದ ಬಹು ಕೋಟಿ ಹಗರಣ ಪ್ರಕರಣ: ಸೊಸೈಟಿ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿ 9 ಮಂದಿಯ ಆಸ್ತಿ ತೀರ್ಪು ಪೂರ್ವ ಜಪ್ತಿ ಮಾಡಿ ಆದೇಶ

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ . ಬೆಳ್ತಂಗಡಿ ಈ ಸಂಘದ 2023-24 ರ ಸಾಲಿನ ಲೆಕ್ಕಪರಿಶೋಧನೆಯಲ್ಲಿ ನಡೆದಿದೆ ಎನ್ನಲಾದ ಬಹು ಕೋಟಿ ಹಗರಣದ ಬಗ್ಗೆ ಸಹಕಾರಿ ಸಂಘದ ಉಪ ನಿಬಂಧಕರು 2023-24 ರಲ್ಲಿ ಜವಬ್ದಾರಿಯಲ್ಲಿದ್ದ 15 ಮಂದಿ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿದ್ದು, ಸೊಸೈಟಿಯ ಜವಾಬ್ದಾರಿ ವಹಿಸಿದ್ದ 9 ಮಂದಿಯ ಆಸ್ತಿಯನ್ನು ತೀರ್ಪು ಪೂರ್ವ ಜಪ್ತಿ ಮಾಡಿ ಜೂ‌.5 ರಂದು ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯ ಆದೇಶ ಮಾಡಿ ನೋಟಿಸ್ ಜಾರಿ ಮಾಡಲಾಗಿದೆ.

ಜಪ್ತಿ ಪೂರ್ವ ಆಸ್ತಿ ಮುಟ್ಟುಗೋಳಿಗೆ ನೋಟಿಸ್ ಜಾರಿಯಾದವರ ವಿವರ:
ಅಧ್ಯಕ್ಷ ಸಿ.ಹೆಚ್.ಪ್ರಭಾಕರ, ನಿರ್ದೇಶಕರಾದ ವಿಶ್ವನಾಥ.ಆರ್.ನಾಯಕ್, ವಿಶ್ವನಾಥ, ಪ್ರಮೋದ್.ಆರ್.ನಾಯಕ್, ಪಿ.ಜಗನ್ನಾಥ್, ರತ್ನಾಕರ ಶೇರಿಗಾರ್, ನಯನ ಶಿವಪ್ರಸಾದ್, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಚಂದ್ರಕಾಂತ್,ಸಿಬ್ಬಂದಿ ಸರಿತಾ ಸೇರಿ ಒಂಭತ್ತು ಮಂದಿಗೆ ಸಹಕಾರ ಸಂಘಗಳ ಉಪ ನಿಬಂಧಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನ್ಯಾಯಾಲಯದಿಂದ ಜೂ.5 ರಂದು ನೋಟಿಸ್ ಜಾರಿಯಾಗಿದೆ.

ನಗದು ಠೇವಣಿ ಇಡಲು ಅವಕಾಶ: ಒಂದು ವೇಳೆ ಜಪ್ತಿ ಪೂರ್ವ ಜಪ್ತಿ ಆದೇಶವನ್ನು ತೆರವುಗೊಳಿಸಲು ಬಯಸಿದಲ್ಲಿ ಜೂ‌.20 ರ ಒಳಗೆ ರೂ.30,45,24,278( ಮೂವತ್ತು ಕೋಟಿ ನಲವತ್ತೈದು ಲಕ್ಷದ ಇಪ್ಪತೈದು ಸಾವಿರದ ಇನ್ನೂರ ಇಪ್ಪತ್ತೆಂಟು) ನಗದು ಭದ್ರತೆಯಾಗಿ ಈ ನ್ಯಾಯಾಲಯದ ಪಿ.ಡಿ ಖಾತೆಯಲ್ಲಿ ನಿಗದಿತ ಅವಧಿಯೊಳಗೆ ಠೇವಣಿ ಇರಿಸತಕ್ಕದ್ದು ಇಲ್ಲವಾದರೆ ಆಸ್ತಿ ಮುಟ್ಟುಗೋಳು ಹಾಕಲಾಗುವುದಾಗಿ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಪ್ರಮುಖ ಆದೇಶ:, ಸಹಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ನೀಡಿರುವ ಆದೇಶದಲ್ಲಿ ಚರಾಸ್ತಿಯನ್ನು ಷರತ್ತಿಗೆ ಒಳಪಟ್ಟು ತೀರ್ಪು ಪೂರ್ವ ಜಪ್ತಿ ಮಾಡಿ ಆದೇಶ ಹೊರಡಿಸಿರುತ್ತೇನೆ. ಒಂದು ವೇಳೆ ಈ ಆದೇಶವನ್ನು ಅತಿಕ್ರಮಿಸಿ ಯಾರದರೂ ಜಪ್ತಿಗೊಳಪಟ್ಟ ಈ ಕೆಳಕಂಡ ಚರಾಸ್ತಿಯನ್ನು ಖರೀದಿಸಿದ್ದಲ್ಲಿ ಅಂತಹ ಹೊಣೆಗಾರಿಕೆಗೆ ಖರೀದಿಸಿದವರೇ ಸಂಪೂರ್ಣ ಹೊಣೆಗಾರರು ಆಗಿರುತ್ತಾರೆ ಎಂದು ನೋಟೀಸ್ ನಲ್ಲಿ ಉಲ್ಲೇಖಿಸಿದ್ದಾರೆ.

Related posts

ಶೈಕ್ಷಣಿಕ ವರ್ಷದಲ್ಲಿ 8 ರಿಂದ 10ನೇ ತರಗತಿ ಮಕ್ಕಳಿಗೆ ತೆರೆದ ಪುಸ್ತಕ ಪರೀಕ್ಷೆ

Suddi Udaya

ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ. 94.11 ಫಲಿತಾಂಶ

Suddi Udaya

ಬೆಳ್ತಂಗಡಿ ಪ.ಪಂ. ನಾಮ ನಿರ್ದೇಶಿತ ಸದಸ್ಯರಾಗಿ ಹೆನ್ರಿ ಲೋಬೊ ಆಯ್ಕೆ

Suddi Udaya

ಪಡಂಗಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಕಾಂಗ್ರೇಸ್ ಮಹಿಳಾ ಘಟಕದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ

Suddi Udaya

ಅಂಡಿಂಜೆ: ನಾರಾವಿ ಮತ್ತು ಅಳದಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ: ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

Suddi Udaya
error: Content is protected !!