ಬೆಳ್ತಂಗಡಿ: ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಅದ್ಹಾ (ಬಕ್ರೀದ್) ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.
ಬೆಳಗ್ಗೆ ಮಸ್ಜಿದ್ ನಲ್ಲಿ ಧರ್ಮ ಗುರುಗಳಾದ ಸಿರಾಜುದ್ದೀನ್ ಸಅದಿ ಗಡಿಯಾರ್ ಈದ್ ಸಂದೇಶ ನೀಡಿದರು. ಬಳಿಕ ಸಾಮೂಹಿಕ ಈದ್ ನಮಾಝ್ ನಡೆಯಿತು.
“ಖುತುಬಾ” ಪಾರಾಯಣ ಬಳಿಕ, ಜಮಾಅತ್ ನಲ್ಲಿ ಮೃತರಾದವರ ಸ್ಮರಣೆಗಾಗಿ ಸಾಮೂಹಿಕವಾಗಿ “ಯಾಸೀನ್” ಪಾರಾಯಣ ನಡೆದು ದುಆ ಪ್ರಾರ್ಥನೆ ಸಲ್ಲಿಸಲಾಯಿತು. ಮಸ್ಲಕ್ ಮದರಸದ ಮುಖ್ಯೋಪಾಧ್ಯಾಯ ತ್ವಾಹಿರ್ ಸಅದಿ ತಕ್ಬೀರ್ ಗೇ ನೇತೃತ್ವ ನೀಡಿದರು.
ಮಸ್ಜಿದ್ ನಿರ್ಮಿಸಲ್ಪಟ್ಟಿರುವ ಜಮಲುಲ್ಲೈಲಿ ತಂಙಳ್ ಕುಟುಂಬದ ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್, ಸಯ್ಯಿದ್ ಸಿಮಾಕ್ ಜಮಲುಲ್ಲೈಲಿ ತಂಙಳ್, ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಬಶೀರ್ ನೆಕ್ಕರೆ, ಕಾರ್ಯಾಧ್ಯಕ್ಷ ಕೆರೀಂ ಕೆ.ಎಸ್, ಪ್ರ. ಕಾರ್ಯದರ್ಶಿ ಅಬ್ಬಾಸ್ ಸಿ, ಕೋಶಾಧಿಕಾರಿ ಕೆರೀಂ ಕುರುಡ್ಯ ಹಾಗೂ ಪದಾಧಿಕಾರಿಗಳು, ಜಮಾಅತ್ ಬಾಂಧವರು ಭಾಗವಹಿಸಿದ್ದರು.
ಪ್ರಾರ್ಥನೆ ಬಳಿಕ ಎಲ್ಲರೂ ಪರಸ್ಪರ ಆಲಿಂಗಿಸಿಕೊಂಡು ಹಬ್ಬದ ಖುಷಿ ಹಂಚಿಕೊಂಡರು. ಪಾನೀಯ ಮತ್ತು ಸಿಹಿ ತಿಂಡಿ ವಿತರಿಸಲಾಯಿತು.