26.1 C
ಪುತ್ತೂರು, ಬೆಳ್ತಂಗಡಿ
June 9, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬೆದ್ರಬೆಟ್ಟು ರಿಫಾಯಿಯ್ಯ ಜುಮಾ ಮಸ್ಜಿದ್‌ನಲ್ಲಿ ಬಕ್ರೀದ್ ಆಚರಣೆ

ಬೆಳ್ತಂಗಡಿ: ರಿಫಾಯಿಯ್ಯ ಜುಮಾ ಮಸ್ಜಿದ್‌ನಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಸೌಹಾರ್ದ ಸಂದೇಶ ಭಾಷಣದೊಂದಿಗೆ ಜೂ.7ರಂದು ಬಕ್ರೀದ್ ಹಬ್ಬ ಆಚರಣೆ ಮಾಡಲಾಯಿತು.

ಸಂದೇಶ ಭಾಷಣ ಮಾಡಿದ ಖತೀಬ್ ಉಸ್ತಾದ್ ಅಬೂ ರಬೀಹ್ ಶರೀಫ್ ಸಖಾಫಿ ಉಜಿರ್ಬೆಟ್ಟು ಸರ್ವ ಧರ್ಮೀಯರಲ್ಲಿ ಸ್ನೇಹ ಸಹಬಾಳ್ವೆಯ ಜೀವನದ ನಡೆಸುವುದು ಕಾಲದ ಬೇಡಿಕೆ.ಪವಿತ್ರ ಇಸ್ಲಾಂ ಧರ್ಮ ಯಾವತ್ತೂ ಸೌಹಾರ್ದತೆ, ಸ್ನೇಹ, ಐಕ್ಯತೆಗೆ ಪ್ರಾಧಾನ್ಯತೆ ನೀಡಿದೆ.ಇತರ ಯಾವುದೇ ಧರ್ಮೀಯರ ಮನಸ್ಸು ನೋಯಿಸುವ ಯಾವುದೇ ರೀತಿಯ ತಪ್ಪು ಸಂದೇಶದಿಂದ ಯುವಕರು ದೂರವಿರಬೇಕು ಎಂದರು.

ಬೆದ್ರಬೆಟ್ಟು ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಬಿ.ಸಲೀಂ, ಗೌರವಾಧ್ಯಕ್ಷ ಹಸನಬ್ಬ, ಪ್ರಧಾನ ಕಾರ್ಯದರ್ಶಿ ಮುಸ್ತಫಾ ಮಾಸ್ಟರ್, ಕೋಶಾಧಿಕಾರಿ ಅಬ್ದುಲ್ ಮಜೀದ್, ಜೊತೆ ಕಾರ್ಯದರ್ಶಿ ಸಿರಾಜುದ್ದೀನ್, ಸಮಿತಿ ಸದಸ್ಯರು, ಊರಿನ ಉಲಮಾ ಉಮರಾ ನಾಯಕರು, ಹಿರಿಯರು, ಯುವಕರು, ಕಿರಿಯರು ಭಾಗಿಯಾದರು.

ಸುನ್ನೀ ಬಾಲಸಂಘ SಃS ವಿದ್ಯಾರ್ಥಿಗಳು ಈದ್ ಶುಭಾಷಯ ಕಾರ್ಡನ್ನು ಸಿಹಿಯೊಂದಿಗೆ ಎಲ್ಲರಿಗೂ ಹಂಚಿ ವಿಶೇಷ ರೀತಿಯ ಬಕ್ರೀದ್ ಹಬ್ಬ ಆಚರಣೆಯಲ್ಲಿ ಭಾಗಿಯಾದರು.

Related posts

ನೆಟ್ ಬಾಲ್ ಕ್ರೀಡೆಯಲ್ಲಿ ಎಸ್.ಡಿ.ಯಂ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

Suddi Udaya

ಗೇರುಕಟ್ಟೆ: ಮನ್ ಶರ್ ವಿದ್ಯಾಸಂಸ್ಥೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ

Suddi Udaya

ಇಂದಬೆಟ್ಟು: ಕಲ್ಲಾಜೆ ನಿವಾಸಿ ಲಿಂಗಪ್ಪ ಗೌಡ ನಿಧನ

Suddi Udaya

ಬೆಳ್ತಂಗಡಿಯಲ್ಲಿ ನೂತನವಾಗಿ ಪ್ರಾರಂಭಿಸಿದ ಡ್ರೀಮ್ ಡೀಲ್ ಗ್ರೂಪ್ಸ್ ಉದ್ಘಾಟನೆ

Suddi Udaya

ಪುಣ್ಯ ಕ್ಷೇತ್ರ ಸವಣಾಲು ಅತಿಶಯ ತೀರ್ಥ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೇಟಿ .

Suddi Udaya
error: Content is protected !!