ಮೂಡುಕೋಡಿ ಶ್ರೀ ರಾಮ ಭಜನಾ ಮಂದಿರದಲ್ಲಿ ಗ್ರಾಮ ಪಂಚಾಯತ್ ವೇಣೂರು, ಅರಣ್ಯ ಇಲಾಖೆ, ಯುವಸೇವಾ ಸಂಗಮ, ಕಾಟಿ ಅಭಿಮಾನಿ ಬಳಗ, ಶ್ರೀ ಕ್ಷೇ, ಧ. ಗ್ರಾ. ಅ. ಯೋಜನೆ, ಶೌರ್ಯ ವಿಪತ್ತು ಘಟಕ ಇವರ ಸಹಕಾರದೊಂದಿಗೆ ವನಮಹೋತ್ಸವ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಸಿ. ಎ. ಬ್ಯಾಂಕ್ ಅಧ್ಯಕ್ಷ ಹಾಗೂ ಪಂ ಸದಸ್ಯ ಸುಂದರ್ ಹೆಗ್ಡೆ ಯವರು ವಹಿಸಿದ್ದರು.

ಈ ವೇಳೆ ಶ್ರೀ ಗಂಧ, ರಕ್ತ ಚಂದನ, ಮಾವು, ಹಲಸು ಸೇರಿದಂತೆ ನೂರು ಗಿಡಗಳ ವಿತರಣೆ ನಡೆಯಿತು
ಕಾರ್ಯಕ್ರಮದಲ್ಲಿ ವೇಣೂರು ಗ್ರಾ.ಪಂ. ತನ್ನ ಶೇ 25ರ ಅನುದಾನದಲ್ಲಿ ಕೊಡಮಾಡುವ ಸವಲತ್ತುಗಳ ವಿತರಣೆಯೂ ನಡೆಯಿತು. ಎರಡನೇ ವಾರ್ಡ್ ನ ಎಲ್ಲಾ ಮನೆಗಳಿಗೆ. ವಿ. ಗಾರ್ಡ್ ಕಂಪನಿ ಯ ಮಿಕ್ಸಿ ಹಾಗೂ ಒಂದನೇ ವಾರ್ಡ್ ನ ಎಲ್ಲಾ ಮನೆಗಳಿಗೆ ಚೇರ್ ವಿತರಣೆ ಮಾಡಲಾಯಿತು.
ಅಲ್ಲದೇ ರ್ಯಾಂಕ್ ವಿಜೇತೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮೂಡುಕೋಡಿಯ ಕು| ಸುಪ್ರಿಯಾಳಿಗೆ ಸನ್ಮಾನಿಸಲಾಯಿತು.
ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು ಪ್ರಸ್ತಾವನೆ, ಸ್ವಾಗತಿಸಿ, ವಕೀಲ ಉಮೇಶ್ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.