ವೇಣೂರು: ವೇಣೂರು ಗ್ರಾಮ ಪಂಚಾಯತ್ ನಿಧಿ 1ರ ಶೇ.25 ರ ಅನುದಾನದಲ್ಲಿ ಕರಿಮಣೇಲು ಗ್ರಾಮದ 1ನೇ ಮತ್ತು 2 ನೇ ವಾರ್ಡಿನ ಪ.ಜಾತಿ/ ಪ.ಪಂಗಡ ಫಲಾನುಭವಿಗಳಿಗೆ ಚಯರ್ ವಿತರಣಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಹೆಗ್ಡೆ,ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು, ಕರಿಮಣೇಲು ಗ್ರಾಮದ 1ನೇ ವಾರ್ಡಿನ ಸದಸ್ಯರುಗಳಾದ ಅರುಣ್ ಹೆಗ್ಡೆ,ಸುಮಾ,ಮಾಲತಿ, 2ನೇ ವಾರ್ಡಿನ ಸದಸ್ಯರುಗಳಾದ ಜಿನ್ನು,ಪುಷ್ಪಾ, ಶೈಲಜಾ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ,ಕಾರ್ಯದರ್ಶಿ, ಲೆಕ್ಕ ಸಹಾಯಕರು, ಪಂಚಾಯತ್ ಸಿಬ್ಬಂದಿ ವರ್ಗ, ಕರಿಮಣೇಲು ಗ್ರಾಮದ ಪ.ಜಾತಿ/ ಪ. ಪಂಗಡದ ಫಲಾನುಭವಿಗಳು ಭಾಗವಹಿಸಿದರು.