ಉಜಿರೆ ಬೆನಕ ಹೆಲ್ತ್ ಸೆಂಟರ್ನಲ್ಲಿ ಜೂ.11 ರಂದು ನಡೆದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ ಮಾತನಾಡುತ್ತ, ನಮ್ಮ ದೈಹಿಕ ಕ್ಷಮತೆ ನಮ್ಮ ಮೂಳೆಯ ಮೇಲೆ ಅವಲಂಬಿತವಾಗಿರುತ್ತದೆ. ಸದೃಢವಾದ ಎಲುಬು ಮತ್ತು ಮೂಳೆಗಳಿಂದ ನಮ್ಮ ದೇಹವೂ ಕೂಡ ಸದೃಢವಾಗಿರುತ್ತದೆ. ಅದಕ್ಕಾಗಿ ವರ್ಷಕೊಮ್ಮೆಯಾದರೂ ನಾವು ಇಂಥ ಶಿಬಿರದಲ್ಲಿ ಪಾಲ್ಗೊಂಡು ನಮ್ಮ ಮೂಳೆ ಸಾಂದ್ರತೆಯನ್ನು ಪರೀಕ್ಷಿಸಿ ನಿಖರವಾದ ದೃಢತೆಯನ್ನು ತಿಳಿದು ಏನಾದರೂ ಕೊರತೆಯಿದ್ದಲ್ಲಿ ತಜ್ಞ ವೈದ್ಯರಿಂದ ಸೂಕ್ತ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿ ಈ ಕಾರ್ಯಕ್ರಮದ ಪ್ರಯೋಜನವನ್ನು ಹೆಚ್ಚು ಹೆಚ್ಚಾಗಿ ಪಡೆದುಕೂಳ್ಳಬೇಕೆಂದು ಕರೆ ನೀಡಿದರು.
ಬೆನಕ ಆಸ್ಪತ್ರೆಯ ಎಲುಬು ಕೀಲು ತಜ್ಞರು ಮತ್ತು ಕೈ ಮೈಕ್ರೋಸರ್ಜರಿ ಪರಿಣಿತರಾದ ಡಾ. ರೋಹಿತ್ ಜಿ.ಕೆ. ಯವರು ಮಾತನಾಡುತ್ತ ನಮ್ಮ ಆರೋಗ್ಯದ ಮೇಲೆ ಮೂಳೆ ಸಾಂದ್ರತೆ ಯಾವ ರೀತಿ ಪರಿಣಾಮವನ್ನು ಬೀಳುತ್ತದೆ ಎಂದು ಉದಾಹರಣೆಗಳ ಸಮೇತ ವಿವರಿಸಿದರು. ಮತ್ತು ಎಲುಬು ಮೂಳೆಗಳ ಕಡಿಮೆ ಕ್ಷಮತೆಯಿಂದ ಯಾವ ರೀತಿಯ ಸಮಸ್ಯೆಗಳು ನಮ್ಮ ಶರೀರದ ಮೇಲೆ ಆಗುತ್ತದೆಂದು ವಿವರಣೆ ನೀಡಿದರು.
ಡಾ. ಭಾರತಿ ಜಿ.ಕೆ. ಕಾರ್ಯಕ್ರಮದ ಪ್ರಸ್ತಾವನೆಗೈದು ವಂದಿಸಿದರು. ಆಸ್ಪತ್ರೆಯ ಪಿಆರ್ಒ ಎಸ್.ಜಿ. ಭಟ್ ಸ್ವಾಗತಿಸಿ ನಿರೂಪಿಸಿದರು.