25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್‌ ವತಿಯಿಂದ ಬಡ ಕುಟುಂಬದ ಸುಬ್ರಾಯ ಗೌಡ ಹತ್ಯಡ್ಕ ರವರಿಗೆ ರೂ.30 ಸಾವಿರ ಚೆಕ್ ಹಸ್ತಾಂತರ

ಬೆಳ್ತಂಗಡಿ:ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್‌ (ರಿ.) ಬೆಳ್ತಂಗಡಿ ಇದರ ವತಿಯಿಂದ ಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಹತ್ಯಡ್ಕದ ಒಕ್ಕಲಿಗ ಗೌಡ ಸಮಾಜದ ಬಡ ಕುಟುಂಬದ ಸುಬ್ರಾಯ ಗೌಡ ಹತ್ಯಡ್ಕ ರವರು ಆಸ್ಪತ್ರೆಯ ಬಿಲ್‌ ಪಾವತಿಸಲು ಅಶಕ್ತರಾಗಿದ್ದು, ಈ ಬಗ್ಗೆ ಸೇವಾ ಟ್ರಸ್ಟ್‌ ಗೆ ಮನವಿ ಮಾಡಿದಾಗ ಆ ಕೂಡಲೇ ಸ್ಪಂದಿಸಿ, ಒಕ್ಕಲಿಗ ಸಮುದಾಯದ ಸದಸ್ಯರಿಂದ ಸಂಗ್ರಹಿಸಿದ ಮೊತ್ತವಾದ ರೂ. 30 ಸಾವಿರ ಮೊತ್ತವನ್ನು ಟ್ರಸ್ಟಿನ ಹತ್ತನೇ ಸೇವಾ ಯೋಜನೆ ಅಡಿಯಲ್ಲಿ ಚಿಕಿತ್ಸೆಗೊಳಪಟ್ಟ ಸುಬ್ರಾಯ ಗೌಡ ಹತ್ಯಡ್ಕ ರವರ ಮನೆಗೆ ತೆರಳಿ ಟ್ರಸ್ಟಿನ ಸ್ಥಾಪಕ ಟ್ರಸ್ಟಿಗಳು ಟ್ರಸ್ಟಿನ ಚೆಕ್ಕನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸ್ಥಾಪಕ ಟ್ರಸ್ಟಿಗಳಾದ ರಂಜನ್ ಜಿ ಗೌಡ, ಶ್ರೀನಿವಾಸ್‌ ಗೌಡ ಬೆಳಾಲು, ಭರತ್ ಗೌಡ ಬಂಗಾಡಿ, ನವೀನ್ ಬಿ.ಕೆ ವಕೀಲರು, ಸೂರಜ್ ಗೌಡ ವಳಂಬ್ರ ಹಾಗೂ ಟ್ರಸ್ಟಿಗಳಾದ ಸುಂದರ ಗೌಡ ಉಡೈರೆ ಮತ್ತು ಧರ್ಮರಾಜ ಗೌಡ ಅಡ್ಕಡಿ ಉಪಸ್ಥಿತರಿದ್ದರು.

Related posts

ಮಾಚಾರು: ಕೋರ್ಯಾರು ನಿವಾಸಿ ಜಯಗೌಡ ನಿಧನ

Suddi Udaya

ಮಚ್ಚಿನ ಹಿಂದೂ ರುದ್ರಭೂಮಿ ಸಮಿತಿಯ ಸದಸ್ಯರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರಿಂದ ಸ್ವಚ್ಚತಾ ಕಾರ್ಯ

Suddi Udaya

ನೆರಿಯ: ಗಂಡಿಬಾಗಿಲು ಸಂತ ತೋಮಸರ ಸಭಾಭವನದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ

Suddi Udaya

ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರಕ್ಕೆ ದ.ಕ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಭೇಟಿ

Suddi Udaya

ಕಳೆoಜ: ನಾಟಿ ವೈದ್ಯೆ ಕಮಲ ನಿಧನ

Suddi Udaya

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮಾ ಮಸೀದಿ ವಾರ್ಷಿಕ ಮಹಾಸಭೆ, ಸಮಿತಿ ರಚನೆ : ಅಧ್ಯಕ್ಷರಾಗಿ ಇಸ್ಮಾಯಿಲ್ ಸನಾ, ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್ ಪುನರಾಯ್ಕೆ

Suddi Udaya
error: Content is protected !!