25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್‌ ವತಿಯಿಂದ ಬಡ ಕುಟುಂಬದ ಸುಬ್ರಾಯ ಗೌಡ ಹತ್ಯಡ್ಕ ರವರಿಗೆ ರೂ.30 ಸಾವಿರ ಚೆಕ್ ಹಸ್ತಾಂತರ

ಬೆಳ್ತಂಗಡಿ:ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್‌ (ರಿ.) ಬೆಳ್ತಂಗಡಿ ಇದರ ವತಿಯಿಂದ ಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಹತ್ಯಡ್ಕದ ಒಕ್ಕಲಿಗ ಗೌಡ ಸಮಾಜದ ಬಡ ಕುಟುಂಬದ ಸುಬ್ರಾಯ ಗೌಡ ಹತ್ಯಡ್ಕ ರವರು ಆಸ್ಪತ್ರೆಯ ಬಿಲ್‌ ಪಾವತಿಸಲು ಅಶಕ್ತರಾಗಿದ್ದು, ಈ ಬಗ್ಗೆ ಸೇವಾ ಟ್ರಸ್ಟ್‌ ಗೆ ಮನವಿ ಮಾಡಿದಾಗ ಆ ಕೂಡಲೇ ಸ್ಪಂದಿಸಿ, ಒಕ್ಕಲಿಗ ಸಮುದಾಯದ ಸದಸ್ಯರಿಂದ ಸಂಗ್ರಹಿಸಿದ ಮೊತ್ತವಾದ ರೂ. 30 ಸಾವಿರ ಮೊತ್ತವನ್ನು ಟ್ರಸ್ಟಿನ ಹತ್ತನೇ ಸೇವಾ ಯೋಜನೆ ಅಡಿಯಲ್ಲಿ ಚಿಕಿತ್ಸೆಗೊಳಪಟ್ಟ ಸುಬ್ರಾಯ ಗೌಡ ಹತ್ಯಡ್ಕ ರವರ ಮನೆಗೆ ತೆರಳಿ ಟ್ರಸ್ಟಿನ ಸ್ಥಾಪಕ ಟ್ರಸ್ಟಿಗಳು ಟ್ರಸ್ಟಿನ ಚೆಕ್ಕನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸ್ಥಾಪಕ ಟ್ರಸ್ಟಿಗಳಾದ ರಂಜನ್ ಜಿ ಗೌಡ, ಶ್ರೀನಿವಾಸ್‌ ಗೌಡ ಬೆಳಾಲು, ಭರತ್ ಗೌಡ ಬಂಗಾಡಿ, ನವೀನ್ ಬಿ.ಕೆ ವಕೀಲರು, ಸೂರಜ್ ಗೌಡ ವಳಂಬ್ರ ಹಾಗೂ ಟ್ರಸ್ಟಿಗಳಾದ ಸುಂದರ ಗೌಡ ಉಡೈರೆ ಮತ್ತು ಧರ್ಮರಾಜ ಗೌಡ ಅಡ್ಕಡಿ ಉಪಸ್ಥಿತರಿದ್ದರು.

Related posts

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಅಡಿಕೆ ಆಮದು ದರ ಏರಿಕೆಗೆ ಕೇಂದ್ರ ಸರಕಾರ ಬದ್ಧ

Suddi Udaya

ಬೆಳ್ತಂಗಡಿಯಲ್ಲಿ ಬಿದಿರು ಕೃಷಿಯ ಬಗ್ಗೆ ತಾಂತ್ರಿಕ ಮಾಹಿತಿ ಕಾರ್ಯಗಾರ

Suddi Udaya

ವಿ. ಹರೀಶ್ ನೆರಿಯ ರವರಿಗೆ ದ್ವಾರಕಾ ಮಯಿ ಮಠ ದಿಂದ “ಭಜಕ ವಿಠಲ ಪ್ರಿಯ ” ಗೌರವ ಪುರಸ್ಕಾರ ಘೋಷಣೆ

Suddi Udaya

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ‌ ಸಂಘದಿಂದ ಜಾಗತಿಕ ಔಷಧ ತಜ್ಞರ ದಿನಾಚರಣೆ

Suddi Udaya

ಧರ್ಮಸ್ಥಳ ನೇತ್ರಾವತಿ ಸೇತುವೆಯ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ : ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya
error: Content is protected !!