23.7 C
ಪುತ್ತೂರು, ಬೆಳ್ತಂಗಡಿ
June 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶುಭಾರಂಭ

ಕೊಕ್ಕಡದಲ್ಲಿ ಸತ್ಯ ಸುದ್ದಿ ನ್ಯೂಸ್ ಕಛೇರಿ ಮತ್ತು ವೆಬ್ ಸೈಟ್ ಲೋಕಾರ್ಪಣೆ

ಕೊಕ್ಕಡ : ಇಲ್ಲಿಯ ವೈಷ್ಣವಿ ಕಾಂಪ್ಲೆಕ್ಸ್ ನಲ್ಲಿ ಸತ್ಯ ಸುದ್ದಿ ನ್ಯೂಸ್‌ ಇದರ ಶುಭಾರಂಭವು ಜೂ. 13 ರಂದು ಪಂಚಮಿ ಹಿತಾರ್ಯುಧಾಮದ ಡಾ| ಮೋಹನ್ ದಾಸ್ ಗೌಡ ರಿಬ್ಬನ್‌ ಕತ್ತರಿಸುವ ಮೂಲಕ ಮತ್ತು ಸೌತಡ್ಕ ಮಹಾಗಣಪತಿ ದೇವಸ್ಥಾನದ ಮುಖ್ಯ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನೆಲ್ಯಾಡಿ ಸೈಂಟ್‌ ಅಲ್ಫೋನ್ಸಾ ಚರ್ಚ್‌ ನ ಧರ್ಮಗುರುಗಳಾದ ವಂದನೀಯ ಫಾ| ಮಾಥ್ಯು ವೆಟ್ಟಂತಡತ್ತಿಲ್‌ ವೆಬ್‌ ಸೈಟ್‌ಗೆ ಚಾಲನೆ ನೀಡುವ ಮೂಲಕ ಸತ್ಯ ಸುದ್ದಿ ನ್ಯೂಸ್‌ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾಗೇಶ್‌ ಕುಮಾರ್‌ , ಕೊಕ್ಕಡ ಕೃಷಿಪತ್ತಿನ ಸಹಕಾರ ಸಂಘ ಅಧ್ಯಕ್ಷ ಕುಶಾಲಪ್ಪ ಗೌಡ, ಉದ್ಯಮಿ ಬಾಲಕೃಷ್ಣ ನೈಮಿಷ ಸೌತಡ್ಕ , ಕೊಕ್ಕಡ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಯೋಗೀಶ್‌ ಆಲಂಬಿಲ , ಉದ್ಯಮಿ ಗಣೇಶ ಗೌಡ ಕಲಾಯಿ , ಎಲ್‌ ಐ ಸಿ ಏಜೆಂಟ್‌ ಉಮೇಶ ಗೌಡ ಕೊಕ್ಕಡ, ಸುರೇಶ ಗೌಡ ಕಲಾಯಿ, ಸಿದ್ದೀಕ್‌ ಪಟ್ಟೂರು, ರಾಜಾ ರಾಮ್‌ ಹೆಬ್ಬಾರ್‌, ಮೋಹನ್‌ ಭಟ್‌, ಹಿರಿಯರಾದ ಪಿ ಪಿ ಫಿಲೋಮಿನ, ಕೃಪಾಮೋಳ್‌ , ವರದಿಗಾರ ಪ್ರಶಾಂತ್‌ ಸಿ ಎಚ್‌ ಉಪಸ್ಥಿತರಿದ್ದು ಶುಭ ಹಾರೈಸಿದರು.

ಬಂದಂತಹ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಆನಂದ ಎನ್.ಎ ಸತ್ಕರಿಸಿ ಸ್ವಾಗತಿಸಿದರು.

Related posts

ಉಜಿರೆ :ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ

Suddi Udaya

ಉಜಿರೆ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಶಿಬಾಜೆಯಲ್ಲಿ ಸಿಮೆಂಟ್ ಶೀಟ್ ಕಟ್ಟಡ ಕೆಡವಿದ ಪ್ರಕರಣ: ಎಂಟು ಮಂದಿಯ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಕೇಸು ದಾಖಲು

Suddi Udaya

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಮಡಿಕೇರಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ರಂಜಿತ್ ಪಾಲ್ತಾಡು ದೇವಸ್ಯ

Suddi Udaya

ಬೆಳ್ತಂಗಡಿ : ಅಕ್ರಮವಾಗಿ ಕಬ್ಬಿಣದ ಗುಜರಿ ವಸ್ತು ಸಾಗಾಟ: ಚಾಲಕ ಪರಾರಿ; ವಾಣಿಜ್ಯ ತೆರಿಗೆ ಇಲಾಖೆಯಿಂದ ಲಾರಿ ವಶಕ್ಕೆ

Suddi Udaya

ಯಕ್ಷಧ್ರುವ ಪಟ್ಣ ಫೌಂಡೇಶನ್ ಬೆಳ್ತಂಗಡಿ ಘಟಕದ ನೇತೃತ್ವ ಡಿ.2: ಉಜಿರೆ ರಥಬೀದಿಯಲ್ಲಿ ” ಯಕ್ಷ ಸಂಭ್ರಮ-2023″

Suddi Udaya
error: Content is protected !!