25.5 C
ಪುತ್ತೂರು, ಬೆಳ್ತಂಗಡಿ
June 8, 2026
ಶಾಲಾ ಕಾಲೇಜು

ಇಂದ ಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿಮಂಡಲ ರಚನೆ

ಇಂದಬೆಟ್ಟು :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟು ಇಲ್ಲಿ
2025 -26 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು.

ವಿದ್ಯಾರ್ಥಿಗಳು ಮತ ಹಾಕುವುದರ ಮೂಲಕ ಶಾಲಾ ನಾಯಕ ಮತ್ತುಉಪನಾಯಕನನ್ನು ಆರಿಸಿದರು. ಶಾಲಾ ನಾಯಕನಾಗಿ 7ನೇ ತರಗತಿಯ ಅಖಿಲೇಶ್ ಹಾಗೂ ಶಾಲಾ ಉಪನಾಯಕನಾಗಿ 6ನೇ ತರಗತಿಯ ಅಭೀಶ್ ಇವರು ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ 6ನೇ ತರಗತಿಯ ನಂದನ್, ಉಪ ಶಿಕ್ಷಣ ಮಂತ್ರಿಯಾಗಿ ಆರನೇ ತರಗತಿಯ ಗಗನ್ ದೀಪ್, ಆರೋಗ್ಯಮಂತ್ರಿಯಾಗಿ 7ನೇ ತರಗತಿಯ ಅಂಕಿತ,ಉಪ ಆರೋಗ್ಯಮಂತ್ರಿಯಾಗಿ 6ನೇ ತರಗತಿಯ ಜೆನ್ನಿಫರ್, ಆಹಾರ ಮಂತ್ರಿಯಾಗಿ 6ನೇ ತರಗತಿಯ ನಿಧಿ,ಉಪಆಹಾರ ಮಂತ್ರಿಯಾಗಿ 5ನೇ ತರಗತಿಯ ಶ್ರೇಯಸ್, ಕ್ರೀಡಾ ಮಂತ್ರಿಯಾಗಿ
ಅಖಿಲ್ ಕೆಎಸ್ ಆರನೇ ತರಗತಿ, ಉಪಕ್ರೀಡಾಮಂತ್ರಿಯಾಗಿ 6ನೇ ತರಗತಿಯ ಶ್ರೇಯಸ್, ನೀರಾವರಿ ಮಂತ್ರಿಯಾಗಿ ಏಳನೇ ತರಗತಿಯ ಸ್ವಸ್ತಿಕ್, ಉಪನೀರಾವರಿ ಮಂತ್ರಿಯಾಗಿ 6ನೇ ತರಗತಿಯ ಭವಿಷ್, ವಾರ್ತಾ ಮಂತ್ರಿಯಾಗಿ ಪ್ರಣಮ್ಯ 7ನೇ ತರಗತಿ,ಉಪವಾರ್ತ ಮಂತ್ರಿ ಆಗಿ 7ನೇ ತರಗತಿಯ
ತ್ರಿಷಾ, ಸ್ವಚ್ಛತಾ ಮಂತ್ರಿಯಾಗಿ 7ನೇ ತರಗತಿಯ ವರ್ಷ,
ಉಪಸ್ವಚ್ಛತಾ ಮಂತ್ರಿಯಾಗಿ 6ನೇ ತರಗತಿಯ ಅದಿತ್, ತೋಟಗಾರಿಕಾ ಮಂತ್ರಿಯಾಗಿ 7ನೇ ತರಗತಿಯ ಧನುಷ್ ಮತ್ತು ಆರನೇ ತರಗತಿಯ ಮೊಹಮ್ಮದ್ ಅರ್ಷಿಲ್, ವಿರೋಧಪಕ್ಷದ ನಾಯಕರಾಗಿ ಏಳನೇ ತರಗತಿಯ ರಾಧೇಶ್, ಸಾಂಸ್ಕೃತಿಕ ಮಂತ್ರಿಯಾಗಿ ಸಚಿತ್ ಐದನೇ ತರಗತಿ, ಆಯ್ಕೆಯಾದರು. ವಿರೋಧಪಕ್ಷದ ಮಂತ್ರಿಗಳಾಗಿ ಸಾನ್ವಿ, ಭುವಿ, ತೇಜಸ್ವಿನಿ, ಲಾವಣ್ಯ,
ಮೊಹಮ್ಮದ್ ಫಾಹಿಮ್ ಜೀವನ್,ವಿಖ್ಯಾತ್ ಆಯ್ಕೆಯಾದರು. ಸ್ಪೀಕರ್ ಆಗಿ 7ನೇ ತರಗತಿಯ ಧನುಷ್ ಇವರು ಆಯ್ಕೆಯಾದರು. ಆಯ್ಕೆಯಾದ ಎಲ್ಲ ಮಂತ್ರಿಗಳಿಗೆ ಮುಖ್ಯ ಶಿಕ್ಷಕಿ ದೀಪ ಇವರು ಪ್ರತಿಜ್ಞಾವಿಧಿ ಭೋದಿಸಿದರು. ಶಿಕ್ಷಕರಾದ ಮೇಘ, ಹರಿಣಿ,ಸುಜಾತ ಉಪಸ್ಥಿತರಿದ್ದರು.

Related posts

ಕೊಕ್ರಾಡಿ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಎಸ್.ಡಿ.ಎಂ ಕಾಲೇಜು ಉಜಿರೆ : “ವಿಜ್ಞಾನ ಸಿಂಚನ -2026” ಅಂತರ್ ಕಾಲೇಜು ರಾಜ್ಯಮಟ್ಟದ ಉತ್ಸವಕ್ಕೆ ಚಾಲನೆ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ” ವಿಜ್ ವರ್ಲ್ಡ್- 2024″ ಸ್ಪರ್ಧೆ

Suddi Udaya

ದ್ವಿತೀಯ ಪಿ.ಯು.ಸಿ ಪರೀಕ್ಷೆ: ಅತ್ಯುತ್ತಮ ಅಂಕ ಗಳಿಸಿದ ವೇಣೂರಿನ ಅಹ್ಮದ್ ಮುಯೀಝ್ ಕಲ್ಕರ್

Suddi Udaya

ಪುದುವೆಟ್ಟು: ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ

Suddi Udaya

ಕರಾಟೆ ಪಂದ್ಯಾಟ: ವಾಣಿ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಇಮ್ತಿಯಾಜ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!