ಲಾಯಿಲ: ಇಲ್ಲಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಇದರ ಆಶ್ರಯದಲ್ಲಿ ನಡೆಯುವ 21 ವರ್ಷದ “ಮೊಸರು ಕುಡಿಕೆ ಉತ್ಸವ”ದ ನೂತನ ಪದಾಧಿಕಾರಿಗಳ ಆಯ್ಕೆ ಶ್ರೀ ವಿಘ್ನೇಶ್ವರ ಕಲಾ ಮಂದಿರದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಭೋಜರಾಜ್ ಪ್ರಗತಿನಗರ, ಕಾರ್ಯದರ್ಶಿಯಾಗಿ ಅರವಿಂದ್ ಶೆಟ್ಟಿ ರಾಘವೇಂದ್ರನಗರ , ಕೋಶಾಧಿಕಾರಿಯಾಗಿ ಸುಜಿತ್ ಗುರಿಂಗಾನ, ಉಪಾಧ್ಯಕ್ಷರಾಗಿ ಪವನ್ ಗಾಂಧಿನಗರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂತೋಷ್ ಆದರ್ಶ ನಗರ ( ಸಿರಿ), ಕ್ರೀಡಾ ಕಾರ್ಯದರ್ಶಿಯಾಗಿ ವಿಜೀತ್ ಗುರಿಂಗಾನ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಸಂತೋಷ್ ಆದರ್ಶನಗರ , ಜೊತೆ ಕೋಶಾಧಿಕಾರಿಯಾಗಿ ನಾಗೇಶ್ ಹೆಗ್ಡೆ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಆರ್ ಇವರನ್ನು ಮುಂದುವರಿಸಲಾಯಿತು. ಅನ್ನಸಂತರ್ಪಣೆ ಸಮಿತಿಯ ಸಂಚಾಲಕರಾಗಿ ಅಜಯ್ ಶಿವಾಜಿನಗರ, ಸುರೇಶ್ ರಾಘವೇಂದ್ರ ನಗರ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಕಾಶಿಬೆಟ್ಟು, ಸಲಹೆಗಾರರಾದ ಆರ್.ರಮೇಶ್ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.