27.1 C
ಪುತ್ತೂರು, ಬೆಳ್ತಂಗಡಿ
June 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಾಯ೯ ಬಿಜೆಪಿ ಸ್ಪಂದನ ಸಮಿತಿಯಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಹಸ್ತ

ಬಾಯ೯: ಇತೀಚೆಗೆ ಸುರಿದ ಭಾರಿಮಳೆಗೆ ಬಾರ್ಯಾ, ಪುತ್ತಿಲ ಗ್ರಾಮದ ಹಲವೆಡೆ ಗುಡ್ಡಕುಸಿದು ತುಂಬಾ ಮನೆಗಳಿಗೆ ಹಾನಿ ಸಂಭವಿಸಿದೆ.


ಕಡು ಬಡತನದಲ್ಲಿರುವ ಕೆಲವು ಕುಟುಂಬಗಳಿಗೆ ಎರಡು ಗ್ರಾಮದ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮನೆಗೆ ಆದ ಹಾನಿ ಸರಿಪಡಿಸಲು ಮತ್ತು ಗುಡ್ಡ ಜರಿತದಿಂದ ಮನೆಗೆ ಬಿದ್ದ ಮಣ್ಣು ತೆರವು ಗೊಳಿಸಲು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಒಟ್ಟುಸೇರಿ ಬಿಜೆಪಿ ಸ್ಪಂದನ ಸಮಿತಿ ರಚನೆ ಮಾಡಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಹಸ್ತ ನೀಡಲಾಯಿತು. ಬಾರ್ಯಾ ಕೃಷಿಪತ್ತಿನ ಸಹಕಾರಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಪ್ರಸನ್ನ ಗೌಡ, ಬಾರ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷರರಾದ ಪ್ರಶಾಂತ್ ಪೈ, ರಾಜೇಶ್ ರೈ, ಮೋನಪ್ಪ ಗೌಡ ಮನಿಲ,ಗೌತಮ್ ಗೌಡ, ಗ್ರಾಮ ಪಂಚಾಯತ್ ಸದಸ್ಯರು ಧರ್ಣಪ್ಪ ಗೌಡ, ಮೋಹನ್ ಅಜಿರ ಮತ್ತಿತರ ದಾನಿಗಳ ನೆರವಿನಿಂದ ಅಜಿರಕೋಂಕೇರಿ, ಪೆಲತ್ತಾಜೆ, ಪೆರಿಯೊಟ್ಟುಗಳಲ್ಲಿ ಯಂತ್ರದ ಮೂಲಕ ಮಣ್ಣು ತೆಗೆಸಲಾಯಿತು ಹಾಗೂ ಯಂತ್ರ ಹೋಗದ ಕಡೆಗಳಲ್ಲಿ ಕೂಲಿಯಾಳುಗಳ ಮೂಲಕ ತೆಗೆಸಲು ಸಹಾಯಧನ ನೀಡಲಾಯಿತು.


ಮೋಹನ ಗೌಡ ಅಜಿರ, ಪ್ರಸನ್ನ ಗೌಡ, ಪ್ರಶಾಂತ್ ಪೖ, ರಾಜೇಶ್ ರೈ, ಶಿವರಾಮ ಬಾರ್ಯ, ಹೇಮಾವತಿ, ಪ್ರವೀಣ್ ರೖ ಹಾಗೂ ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಅನಾರೋಗ್ಯದಿಂದ ಬಳಲುತ್ತಿರುವ ಅನಿತಾ ದರ್ಖಾಸು ಅವರಿಗೆ ರೂ.10,000 ಚೆಕ್ಕನ್ನು ನೀಡಲಾಯಿತು.

Related posts

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿಗೆ ಶೇ.100 ಫಲಿತಾಂಶ

Suddi Udaya

ಮೇಲಂತಬೆಟ್ಟುವಿನ ಮನೆಯಂಗಳದಲ್ಲಿ ಭಾರಿಗಾತ್ರದ ಕಾಳಿಂಗ ಸರ್ಪ: ಕಾಳಿಂಗ ಸರ್ಪವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

Suddi Udaya

ಕಕ್ಕಿಂಜೆ: ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ವೇಣೂರು ಆರಕ್ಷಕ ಠಾಣೆಯಲ್ಲಿ ಮಿಲಾದುನ್ನೆಭಿ ಪ್ರಯುಕ್ತ ಶಾಂತಿ ಸಭೆ

Suddi Udaya

ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಲಿಮಿಟೆಡ್ ಇದರ ನೂತನ ನಿರ್ದೇಶಕರಾಗಿ ಮುಂಬಯಿ ಉದ್ಯಮಿ ನಾರಾಯಣ ಸುವರ್ಣ ಮರೋಡಿ ಆಯ್ಕೆ

Suddi Udaya

ಜ.12: ಮುಂಡಾಜೆಯಲ್ಲಿ ಸಾವಿರದ ಸಾಧಕರು ಮನೆಮನದ ಸಮ್ಮಾನ:

Suddi Udaya
error: Content is protected !!