

ಪುಂಜಾಲಕಟ್ಟೆ: ಇಲ್ಲಿಯ ಪುರಿಯ ರಸ್ತೆಯು ತೀರಾ ಹದಗೆಟ್ಟಿದ್ದು ಅಭಿವೃದ್ಧಿ ಪಡಿಸುವ ಸಲುವಾಗಿ ಪುಂಜಾಲಕಟ್ಟೆ ಸ್ಪಂದನ ರಿಕ್ಷಾ ಚಾಲಕ ಮಾಲಕರ ಸಂಘವು ರಸ್ತೆಯ ಬಗ್ಗೆ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ ಎಂದು ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಚಾಲಕ ಮಾಲಕರ ನಿರ್ಧಾರದಂತೆ ಕೆತ್ತಿಗುಡ್ಡೆ, ಪುರಿಯ, ಉರ್ಲಾ, ಬುಲೆಕ್ಕಾರ ಕಡೆಗೆ ರಿಕ್ಷಾ ಬಾಡಿಗೆ ಮತ್ತು ಶಾಲಾ ಟ್ರಿಪ್ ಗಳನ್ನು ಜೂ. 23 ರಿಂದ ಅನಿರ್ದಿಷ್ಟವಾದಿಯಾಗಿ ಸ್ಥಗಿತಗೊಳಿಸುವಂತೆ ನಿರ್ಧರಿಸಿದ್ದಾರೆ.











