ತೆಕ್ಕಾರು: ಕರ್ನಾಟಕದ ಭ್ರಷ್ಟ ಸರಕಾರದ ವಿರುದ್ಧ, ಜನವಿರೋಧಿ ನಿಲುವು, ಜನರಿಗೆ ರಕ್ಷಣೆ ಇಲ್ಲ, ಅಭಿವೃದ್ಧಿ ಕಾರ್ಯಗಳು ಕುಂಠಿತ, ಸರಕಾರದ ಆಡಳಿತ ವೈಫಲ್ಯದಿಂದ ಅಧಿಕಾರಿಗಳ ಎತ್ತಂಗಡಿ, ಸರಕಾರಿ ಇಲಾಖೆಯಯಲ್ಲಿ ಲಂಚವಿಲ್ಲದೆ ಸಾರ್ವಜನಿಕರ ಕೆಲಸಕಾರ್ಯಗಳು ನಡೆಯುತಿಲ್ಲ,ಗ್ಯಾರಂಟಿ ಗೊಲ್ಮಾಲ್,ಪಿಂಚಣಿ ತಿರಸ್ಕ್ರತ, ಭೂಅಕ್ರಮಸಕ್ರಮ, 94c ಅರ್ಜಿಗಳನ್ನು ವಿಲೇವಾರಿಗೆ ಮೀನ ಮೇಷ ವಿರೋಧಿಸಿ ತೆಕ್ಕಾರು ಭಾರತೀಯ ಜನತಾ ಪಾರ್ಟಿ ವತಿಯಿಂದ ಗ್ರಾಮಪಂಚಾಯತ್ ಎದುರು ಜೂ.23ರಂದು ಪ್ರತಿಭಟನೆ ನಡೆಯಿತು.

ಬಳಿಕ ಪಿಡಿಓ ಮೂಲಕ ಕರ್ನಾಟಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯೆ ಯಮುನಾ ನಾಯ್ಕ್, ಸಿಎ ಬ್ಯಾಂಕ್ ನಿರ್ದೇಶಕರಾದ ಕೃಷ್ಣಪ್ಪ ಮೂಲ್ಯ, ಮಾಜಿ ತಾ. ಪಂ. ಸದಸ್ಯ ಮಂಜುನಾಥ್ ಸಾಲ್ಯನ್, ಬಿಜೆಪಿ ತೆಕ್ಕಾರು ಶಕ್ತಿಕೇಂದ್ರದ ಸುನಿಲ್ ಮತ್ತಿತರರು ಹಾಜರಿದ್ದರು.











