ಶಿಶಿಲ: ಇಲ್ಲಿಯ ದೇವಸ್ಥಾನ ಬಳಿಯ ಮತ್ಸ್ಯ ತೀರ್ಥ ಮನೆ ನಿವಾಸಿ ಪುರುಷೋತ್ತಮ ರಾವ್(ಶೇಖರ್)(65 ವ.)ರವರು ಅನಾರೋಗ್ಯದಿಂದ ಜೂ. 24ರಂದು ರಾತ್ರಿ ನಿಧನರಾದರು.
ಹಿಂದೆ ಶಿಶಿಲ ದೇವಸ್ಥಾನದ ಸಮಿತಿ ಸದಸ್ಯರಾಗಿ, ಕೊಳಕ್ಕೆಬೈಲು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ, ಕ್ರೀಡೆ ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಮಮತಾ, ಮಕ್ಕಳಾದ ಪ್ರಜ್ವಲ್ ಮತ್ತು ಪ್ರಭಾತ್ ಮತ್ತು ಅನೇಕ ಬಂಧು ಬಳಗವನ್ನು ಅಗಲಿರುತ್ತಾರೆ.











