

ಬೆಳ್ತಂಗಡಿ: ತಾಲೂಕಿನಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಗುರುವಾರ ಸುರಿದ ಗಾಳಿ ಮಳೆಗೆ ನಾಲ್ಕೂರು ಗ್ರಾಮದ ಕೆಂರ್ಪುಂಜದಲ್ಲಿ ಹಾಗೂ ಬಳಂಜ ಗ್ರಾಮ ವ್ಯಾಪ್ತಿಯಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.


ಹೆಚ್ ಟಿ ಲೈನ್ ಮೇಲೆ ಮರ ಬಿದ್ದ ಪರಿಣಾಮ 7 ಕಂಬಗಳು ಸಹಿತ ಒಂದು ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದೆ. ಮೆಸ್ಕಾಂ ಮತ್ತು ಊರಿನವರ ಸಹಕಾರದಿಂದ ಮರವನ್ನು ತೆರವುಗೊಳಿಸಲಾಯಿತು.











