ಬೆಳ್ತಂಗಡಿ: ಬಾರ್ಯ ನಿವಾಸಿ ಅಜಯ್ ಜೋಹಾನ್ ಬ್ರಾಗ್ಸ್, ಇವರು ಎಸ್.ಎಸ್.ಬಿ ಸಂದರ್ಶನದಲ್ಲಿ ಉತ್ತೀರ್ಣಗೊಂಡು ಭಾರತೀಯ ನೌಕಾಪಡೆಗೆ ಆಯ್ಕೆಯಾಗಿದ್ದಾರೆ.

ಇದೆ ಜುಲೈ 14 ರಂದು ಕಾರ್ಯನಿರ್ವಾಹಕ ಶಾಖೆ (ಸಾಮಾನ್ಯ ಸೇವೆ) ಗಾಗಿ ಎಜಿಮಲಾದ ಭಾರತೀಯ ನೌಕಾ ಅಕಾಡೆಮಿಗೆ ಸೇರಲಿರುವ ಇವರು ಶಾಸಕ ಹರೀಶ್ ಪೂಂಜರವರನ್ನು ಭೇಟಿ ಮಾಡಿದರು. ಇದೆ ಸಂದರ್ಭದಲ್ಲಿ ಶಾಸಕರು ಅವರನ್ನು ಅಭಿನಂದಿಸಿದರು.











