

ಬೆಳ್ತಂಗಡಿ ತಾಲೂಕಿನದ್ಯಾಂತ ಭಾರೀ ಮಳೆಯಾಗುತ್ತಿದ್ದು ಜೂ. 25, 26 ರಂದು ಸುರಿದ ಭಾರಿ ಗಾಳಿ ಮಳೆಗೆ ಹಲವು ಕಡೆ ಮನೆಗಳಿಗೆ ಮರ ಬಿದ್ದು ಹಾನಿ ಉಂಟಾಗಿದ್ದು, ಇನ್ನು ಕೆಲವು ಕಡೆ ಮನೆಯೇ ಕುಸಿದು ಬಿದ್ದು ಅಪಾರ ಹಾನಿ ಉಂಟಾಗಿದೆ.


ಶಿಶಿಲ ಗ್ರಾ.ಪಂ. ವ್ಯಾಪ್ತಿಯ ಕಿನ್ಯಡ್ಕ ಎಂಬಲ್ಲಿ ಜಗದೀಶ ರವರ ವಾಸದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿರುತ್ತದೆ. ಕುತ್ಲೂರು ಗ್ರಾಮದ ಸುಲೋಚನ ಜೈನ್ ಇವರ ವಾಸದ ಮನೆ ಕುಸಿತವಾಗಿದೆ. ಸೋಣಂದೂರು ವಡ್ಡ ಮನೆ ನಿವಾಸಿ ಕೃಷ್ಣಯ್ಯ ಆಚಾರ್ ರವರ ಮನೆಗೆ ಮರ ಬಿದ್ದು ಹಾನಿಯಾಗಿದೆ,. ಹಾಗೂ ಪಟ್ರಮೆ ಗ್ರಾಮದ ಪಂಜುರ್ಲಿಕೋಡಿ ಎಂಬಲ್ಲಿಯ ಮಾಯಿಲ ರವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ.











