22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಟಿಪ್ಪರ್ ಬಾಡಿಗೆ ವಿಚಾರದಲ್ಲಿ ಕೊಲೆ ಯತ್ನ ಆರೋಪ : ಇಬ್ಬರ ವಿರುದ್ಧ ಪ್ರತಿದೂರು ದಾಖಲು

ಬೆಳ್ತಂಗಡಿ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳಲು ಹೋದವನ ಮೇಲೆ ಸೋಡಾ ಬಾಟಲ್ ಎಸೆದು ಕೊಲೆಗೆ ಯತ್ನಸಿದ ಪ್ರಕರಣದ ಆರೋಪದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.27 ರಂದು ಹಲ್ಲೆಗೊಳಗಾದ ಮಹಮ್ಮದ್ ತೌಸಿಫ್ ಸ್ನೇಹಿತ ನೀಡಿದ ದೂರಿನ ಮೇರೆಗೆ ರಹೀಂ ಮತ್ತು ಮಹಮ್ಮದ್ ಫೈಯಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣ ಸಂಬಂಧ ಮುನೀರ್ ಮತ್ತು ತೌಸಿಫ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.28 ರಂದು ರಹೀಂ ನೀಡಿದ ದೂರಿನ ಮೇರೆಗೆ BNS 2023 (U/s-115(2),118(1),351(2), r/w 3(5)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ‌.

Oplus_131072

*ಪ್ರಕರಣ: ರಹೀಂ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಜೂ. 27 ರಂದು ರಹೀಂ ಮತ್ತು ಮಹಮ್ಮದ್ ಫಯಾಜ್ ರವರು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಎಂಬಲ್ಲಿ ಮನ್ಸೂರ್ ಎಂಬವರ ಅಂಗಡಿ ಬಳಿ ನಿಂತುಕೊಂಡಿದ್ದಾಗ ಸಮಯ ಮಧ್ಯಾಹ್ನ 3 ಗಂಟೆಗೆ ರಿಡ್ಜ್ ಕಾರಿನಲ್ಲಿ ಮುನೀರ್ ಮತ್ತು ತೌಸಿಫ್ ರವರು ಬಂದು ಕಾರಿನಿಂದ ಇಳಿದು ಹಣದ ವ್ಯವಹಾರ ವಿಚಾರವಾಗಿ ಹಣವನ್ನು ಯಾವಾಗ ಕೊಡುತ್ತಿಯ ಎಂದು ಹೇಳಿ ತೌಸಿಫ್ ಎಂಬಾತನು ರಹೀಂಗೆ ಕೈಯಿಂದ ಬೆನ್ನಿಗೆ, ಮುಖಕ್ಕೆ ಹೊಡೆದಿರುತ್ತಾನೆ, ಆ ಸಮಯ ಮಹಮ್ಮದ್ ಫಯಾಜ್ ನು ತೌಸಿಫ್ ನನ್ನು ಹಿಡಿದುಕೊಂಡು ಹೊಡೆಯಬೇಡ ಎಂದು ಹೇಳುತ್ತಿರುವ ಸಮಯ ಮುನೀರ್ ಎಂಬಾತನು ರಾಡ್ ನಿಂದ ರಹೀಂ ತಲೆಯ ಹಣೆಗೆ ಹೊಡೆದು ರಕ್ತ ಗಾಯವಾಗಿರುತ್ತದೆ. ನಂತರ ಮುನೀರ್ ನು ಕೈಯಿಂದ ರಹೀಂ ಬೆನ್ನಿಗೆ ಗುದ್ದಿ ನೋವಾಗಿದ್ದು, ನಂತರ ಮಹಮ್ಮದ್ ಫಯಾಜ್ ನಿಗೆ ಮುನೀರ್ ಮತ್ತು ತೌಸಿಫ್ ಕೈಯಿಂದ ಬೆನ್ನಿಗೆ ಹೊಡೆದು ನೋವುಂಟು ಮಾಡಿರುತ್ತಾರೆ. ನಂತರ ಅಲ್ಲಿ ಜನರು ಸೇರಿದ್ದು ಅಲ್ಲಿಂದ ರಹೀಂ ಮತ್ತು ಫಯಾಜ್ ರವರು ಹೋಗುವಾಗ ಮುನೀರ್ ಮತ್ತು ತೌಸಿಫ್ ನು ರಹೀಂ ಉದ್ದೇಶಿಸಿ “ನಿನಗೆ ಒಂದು ಗತಿ ಕಾಣಿಸುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Related posts

ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ತಿರಂಗ ಯಾತ್ರೆ ಪಂಜಿನ ಮೆರವಣಿಗೆ

Suddi Udaya

ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ “ಪೆರ್ಲ ಬೈಪಾಡಿ ಊರುದ ಭಕ್ತಿದ ಎಸಲ್” ತುಳು ಆಡಿಯೋ & ವಿಡಿಯೋ ಆಲ್ಬಮ್ ಬಿಡುಗಡೆ

Suddi Udaya

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ ಕುಮಾರ್ ಹೆಗ್ಡೆ ರವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ

Suddi Udaya

ಬೆಳ್ತಂಗಡಿ ನ.ಪಂ. ವ್ಯಾಪ್ತಿಯ ಮಾಡ್ಯಾಲೋಟ್ಟುನಲ್ಲಿ ರಸ್ತೆಗೆ ಗುಡ್ಡ ಕುಸಿತ

Suddi Udaya

ಲಾಯಿಲ: ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಸುಲ್ಕೇರಿ: ನಾವರ ಗ್ರಾಮದ ಪ್ರತಿ ಮನೆಗೂ ದಿನದ 24 ಗಂಟೆಯೂ ಪೂರ್ತಿ ನೀರು ಸರಬರಾಜು

Suddi Udaya
error: Content is protected !!