
ಗೇರುಕಟ್ಟೆ : ಗೇರುಕಟ್ಟೆ ಸಮೀಪದ ಬಂಗ್ಲೆಗುಡ್ಡೆ ಪಕ್ಕದಲ್ಲಿರುವ ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಸ್ತೆ ಪಕ್ಕದ ವಿದ್ಯುತ್ ತಂತಿಗೆ ದೊಡ್ಡ ಗಾತ್ರದ ಒಣಗಿದ ಮರ ಬಿದ್ದು ನೇತಾಡುತ್ತಿದೆ. ಸಾರ್ವಜನಿಕರು, ವಾಹನ ಸವಾರರು ಜೀವ ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ.


2 ತಿಂಗಳ ಹಿಂದೆ ರಾಜ್ಯ ಹೆದ್ದಾರಿ ರಸ್ತೆ ಪಕ್ಕದ ಅಪಾಯದಲ್ಲಿರುವ ಒಣಗಿದ ಮರಗಳನ್ನು ತೆರವು ಮಾಡುವಂತೆ ಈ ಹಿಂದೆ ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನು ನೋಡಿದರೂ ಹೆಚ್ಚುತ್ತು ಕೊಂಡಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಹಲವಾರು ಕಡೆಗಳಲ್ಲಿ ಅಪಾಯದಲ್ಲಿರುವ ಒಣ ಮರಗಳನ್ನು ತೆರವು ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದರು.











