ಸುಲ್ಕೇರಿ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಸುಲ್ಕೇರಿಯ ಮುಳ್ಳಗುಡ್ಡೆ ನಿವಾಸಿ ಅಣ್ಣು ಪೂಜಾರಿ ಇವರ ಮನೆ ಸಂಪೂರ್ಣ ಕುಸಿದು ಬಿದ್ದು ಅಪಾರ ಹಾನಿಯಾಗಿರುತ್ತದೆ.
ಈ ಬಗ್ಗೆ ಪರಿಶೀಲನೆಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಮ್, ನಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಎನ್ ವೀರೇಂದ್ರ ಕುಮಾರ್ ಜೈನ್, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ವಾಸುದೇವ ರಾವ್, ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಶ್ರೀಮತಿ ಸವಿತಾ, ಕೊರಗಪ್ಪ ಪೂಜಾರಿ ಮಣಿಕಂಠ ನಿವಾಸ ಸುಲ್ಕೇರಿ ಹಾಗೂ ಜಯಾನಂದ ಸುಲ್ಕೇರಿ ಇವರುಗಳು ಭೇಟಿ ನೀಡಿದರು.











