
ವೇಣೂರು: ಇಲ್ಲಿನ ಮಹಾವೀರ ನಗರದ ಪ್ರಸಾದ್ ಕ್ಲಿನಿಕ್ ನ ಪ್ರಖ್ಯಾತ ವೈದ್ಯರಾಗಿದ್ದ ಡಾ. ರವೀಂದ್ರ ಪ್ರಸಾದ್ (75ವ)
ಅವರು ಅಲ್ಪ ಕಾಲದ ಅಸೌಖ್ಯದಿಂದ ಜು.4ರಂದು ನಿಧನರಾದರು.
ಪೆರಿಂಜೆ ಬಳಿಯ ಬಡಕೋಡಿ ನಿವಾಸಿ ಯಾಗಿರುವ ಇವರು ಕೃಷಿಕರಾಗಿದ್ದು, ವೇಣೂರುನಲ್ಲಿ ಹಲವು ದಶಕಗಳಿಂದ ವೈದ್ಯಕೀಯ ಸೇವೆ ನೀಡಿ, ಜನಪ್ರಿಯ ವೈದ್ಯರಾಗಿ ಜನರ ಪ್ರೀತಿ – ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇವರು ವೇಣೂರು ಲಯನ್ಸ್ ಕ್ಲಬ್ ಸೇರಿದಂತೆ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ ಬಂಧು – ವಗ೯ದವರನ್ನು ಅಗಲಿದ್ದಾರೆ.
ವರದಿ: ಹೆಚ್.ಮಹಮ್ಮದ್ ವೇಣೂರು











