ಶಿಶಿಲ: ಕಳೆದ 41 ವರ್ಷದಲ್ಲಿ ಶ್ರೀ ಧರ್ಮಸ್ಥಳ ಯೋಜನೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಸಮಾಜ ಸೇವೆಯೊಂದಿಗೆ, ಧಾರ್ಮಿಕ ಕಾರ್ಯಕ್ರಮ, ಭಜನೆ ಮುಂತಾದ ಕಾರ್ಯದಲ್ಲಿ ಅವರ ಕೆಲಸ ಕಾರ್ಯದಲ್ಲಿ ಪ್ರಾಮಾಣಿಕತೆಯನ್ನು ಮೆಚ್ಚಿದ್ದೆವೆ. ಇನ್ನೂ ಅವರ ಸೇವೆ ಸಮಾಜದಲ್ಲಿ ಮುಂದುವರಿಯಲಿ ಎಂದು ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಹೇಳಿದರು.
ಅವರು ಶಿಶಿಲ ಬಿ. ಜಯರಾಮ ನೆಲ್ಲಿತ್ತಾಯರವರ ಸ್ವಗೃಹದಲ್ಲಿ ಅಭಿನಂದನೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುಷ್ಪಗಿರಿ ತಂಡದ ಸದಸ್ಯರು, ಗ್ರಾಮದ ಹಿಂದೂ ಕಾರ್ಯಕರ್ತರು ಹಾಜರಾಗಿದ್ದರು.











