May 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾವೂರು ಸರ್ವೋದಯ ಟ್ರಸ್ಟ್ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

ನಾವೂರು: ಇಲ್ಲಿಯ ಸರ್ವೋದಯ ಟ್ರಸ್ಟ್ ಇದರ ನೇತೃತ್ವದಲ್ಲಿ ಆಯುಷ್ ಫೆಡರರೇಶನ್ ಆಫ್ ಇಂಡಿಯಾ, ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ, ಪ್ರಸನ್ನ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಲಾಯಿಲ, ಬಾಹುಬಲಿ ಕ್ರೆಡಿಟ್ ಸೌಹಾರ್ದ ಪತ್ತಿನ ಸಹಕಾರಿ ಸಂಘ ಕಾರ್ಕಳ, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ(ನಿ)ಬಂಗಾಡಿ, ಇವರ ಸಹಭಾಗಿತ್ವದಲ್ಲಿ ರಕ್ತನಿಧಿ ಕೇಂದ್ರಕ್ಕೆ ಎಂ ಸಿ ಇದರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿ ಜು. 6 ರಂದು ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ನೆರವೇರಿಸಿ ಇಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಶಿಬಿರದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಶಾಸಕ ಪ್ರತಾಪ ಸಿಂಹ ನಾಯಕ್, ರೋಟರಿ ಕ್ಲಬ್ ನ ಅಧ್ಯಕ್ಷ ರೊ।ಪ್ರಕಾಶ್ ಪ್ರಭು, ಕಾರ್ಯದರ್ಶಿಗಳಾದ ರೊ।ಡಾ ಎಂ ಎಂ ದಯಾಕರ್ , ನಿಕಟ ಪೂರ್ವ ಅಧ್ಯಕ್ಷ ರೊ।ಪೂರಣ್ ವರ್ಮ, ನಿಕಟ ಪೂರ್ವ ಕಾರ್ಯದರ್ಶಿ ರೊ। ಸಂದೇಶ್ ರಾವ್, ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ರೊ। ಸುಮಂತ್ ಕುಮಾರ್ ಜೈನ್ , ರಾಜಶೇಖರ ಅಜ್ರಿ, ಡಾ। ಶಿವರಾಜ ಪಜಿಲ, ಡಾ ಶ್ರಾವ್ಯ , ಡಾ। ಕವಿತಾ, ಹೋಲಿ ಕ್ರಾಸ್ ಚರ್ಚ್ ಮಂಜೊಟ್ಟಿಯ ಧರ್ಮಗುರುಗಳಾದ ಫಾ। ಪೌಲ್ ಸೆಬಾಸ್ಟಿನ್, ನಾವೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಸುನಂದ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಹರೀಶ್ ಸಾಲ್ಯನ್ ಮೊರ್ತಾಜೆ, ಲಕ್ಷ್ಮಣ ಗೌಡ ಇರ್ತಿಲಾಲ್, ಎ ಬಿ ಉಮೇಶ್ ಅತ್ಯಡ್ಕ, ಎಸ್ ಎನ್ ಭಟ್ ಬೊಳಿಯಂಜಿ, ಸೇವಿಯರ್ ಪಾಲೇಲಿ, ಸುನಿಲ್ ನಾವೂರು, ಮುನಿರಾಜ ಅಜ್ರಿ,ಹಬೀಬ್ ಸಾಹೇಬ್ ನಡ, ಗಣೇಶ್ ಕಣಾಲು, ಶ್ರೀಮತಿ ವೇದಾವತಿ ನಾವೂರು, ಶ್ರೀಮತಿ ಪ್ರಿಯಾ ಸಂಪಿಂಜ, ಹಸ್ಸೈನಾರ್ ನಾವೂರು, ಉಮೇಶ್ ಪ್ರಭು, ದಿನೇಶ್ ಪ್ರಭು, ಮೋಹನ್ ಕಾರಿಂಜ, ಅಜಿತ್ ಆರಿಗ, ಮುಖ್ಯ ಶಿಕ್ಷಕಿ ಶ್ರೀಮತಿ ರೋಹಿಣಿ, ರಾಜೇಂದ್ರ ಮುಖ್ಯ ಶಿಕ್ಷಕರು, ಪ್ರವೀಣ್ ವಿ ಜಿ, ಗ್ರಾಮಾಭಿವೃದ್ಧಿ ಯೋಜನೆಯ ಶ್ರೀಮತಿ ಉಷಾ ಬೆಳಾಲು, ಜನಾರ್ದನ ಕಡ್ತ್ಯಾರು, ಧರ್ಣಪ್ಪ ಮೂಲ್ಯ, ದಿನೇಶ್ ಪ್ರಭು, ಗಣೇಶ್ ಗೌಡ ಹಾಗೂ ಸೆಬಾಸ್ಟಿನ್ ವಿ ಪಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷ ನೇಮಿರಾಜ ಆರಿಗ ಅಧ್ಯಕ್ಷತೆ ವಹಿಸಿದ್ದರು.

ಸಹಕಾರ ನೀಡಿದ ಸಂಘ ಸಂಸ್ಥೆಗಳ ಪ್ರಮುಖರಾದ ಶ್ಯಾಮ ಭಟ್ ಅತ್ತಾಜೆ, ಅಶ್ವತ್ಥ ಭಟ್ ಪಡ್ಪು, ಹನೀಫ್ ಕೇಲ್ತಾಜೆ, ಶಾಹುಲ್ ನಾವೂರು, ಜಯಾನಂದ ಗೌಡ, ಉಮೇಶ್ ಮಾಲೂರು , ತೀಕ್ಷಿತ್ ದಿಡುಪೆ, ರಮೇಶ್ ನೂಜಿಲೆ, ರಾಮಣ್ಣ ಕುಂಬಾರ, ಲೋಕೇಶ್ ಕುಕ್ಕಾವು, ಹರೀಶ್ ಮಾಂಜ್ಯ, ಪ್ರಕಾಶ್ ಇಜ್ಜಲ, ಪ್ರಮೋದ್ ಗೌಡ ಬೆದ್ರಬೆಟ್ಟು ,ಮುಂತಾದವರು ಭಾಗವಹಿಸಿದರು.

ಪ್ರಧಾನ ಸಂಚಾಲಕರಾದ ಡಾ। ಪ್ರದೀಪ್ ಆಟಿಕುಕ್ಕೆ ಸ್ವಾಗತಿಸಿದರು. ಹರೀಶ್ ಕಾರಿಂಜ ವಂದಿಸಿದರು. 201 ಯುನಿಟ್ ರಕ್ತವು ಸಂಗ್ರಹಿಸಲ್ಪಟ್ಟಿರುತ್ತದೆ.

Related posts

ಕರಾಯ: ನೀರು ಕುಡಿಯುವ ನೆಪದಲ್ಲಿ ಮನೆಯೊಳಗೆ ಬಂದು ಮಹಿಳೆಯ ಚಿನ್ನಾಭರಣ ದೋಚಿ ಪರಾರಿ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ. ಸಹಕಾರ ಸಂಘದ ರೈತ ಸದಸ್ಯರಿಂದ ಕಡಮ್ಮಾಜೆ ಫಾರ್ಮ್ಸ್ ಗೆ ಭೇಟಿ: ಸಾಕಾಣಿಕೆಗಳ ಹಾಗೂ ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ಶಿಬಿರ

Suddi Udaya

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಅ.17ರಂದು ವಿದ್ಯುತ್ ನಿಲುಗಡೆ

Suddi Udaya

ಮುಂಡಾಜೆ: ಕೀರ್ತನಾ ಕಲಾತಂಡದಿಂದ ಕನಕ ಜಯಂತಿ ಆಚರಣೆ

Suddi Udaya

ಎಲೆಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್

Suddi Udaya

ಮೇಲಂತಬೆಟ್ಟು: ಹಾನಿಗೊಳಗಾದ ಪ್ರದೇಶಗಳಿಗೆ ವಿ.ಪ. ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ; ಪರಿಶೀಲನೆ

Suddi Udaya
error: Content is protected !!