September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮನೆಯ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ರೂ.1.70 ಲಕ್ಷ ಮೌಲ್ಯದ ಮರಳು ವಶ

ಆರಂಬೋಡಿ: ಮನೆಯ ತೋಟದಲ್ಲಿ ಆಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೂ. 1.70 ಲಕ್ಷ ಮೌಲ್ಯದ ಮರಳನ್ನು ವೇಣೂರು ಪೊಲೀಸರು ಖಚಿತ ಮಾಹಿತಿ ಮೇಲೆ ವಶಪಡಿಸಿಕೊಂಡ ಪ್ರಕರಣ ಜು.9 ರಂದು ವರದಿಯಾಗಿದೆ.


ಆರಂಬೋಡಿ ಗ್ರಾಮದ ಕಾಂತರಬೆಟ್ಟು ಎಂಬಲ್ಲಿ ಸುಕೀತ್ ಎಂಬವರು ತನ್ನ ಮನೆಯ ಸಮೀಪ ತೋಟದ ಜಮೀನಿನ ಬಳಿ ಹರಿಯುವ ಫಲ್ಗುಣಿ ನದಿಯಿಂದ ಸುಮಾರು 3-4 ತಿಂಗಳ ಹಿಂದೆ ಅಕ್ರಮವಾಗಿ ಮರಳುಗಾರಿಕೆ ನಡೆಸಿ ತೋಟದಲ್ಲಿ ಸಂಗ್ರಹಿಸಿಟ್ಟುವುದಾಗಿ ವೇಣೂರು ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು.

ಈ ಮಾಹಿತಿಯನ್ವಯ ಪೊಲೀಸರು ಜು.9ರಂದು ಮಧ್ಯಾಹ್ನ ಆರಂಬೋಡಿ ಗ್ರಾಮದ ಕಾಂತರಬೆಟ್ಟು ಎಂಬಲ್ಲಿ ಹೋಗಿ ಪರಿಶೀಲಿಸಿದಾಗ, ತೋಟದ ಬಳಿ ಅಂದಾಜು ಮೌಲ್ಯ ರೂ 1,70,000 ಮೌಲ್ಯದ ಸುಮಾರು 150-170 ಟನ್ ಗಳಷ್ಟು ಮರಳನ್ನು ತೋಟದಲ್ಲಿ ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related posts

ರಾಷ್ಟ್ರಮಟ್ಟದ ಚೆಸ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾದ ಶಿಬಾಜೆಯ ವಿರಾಜ್ ಜೆ ಪೂಜಾರಿ

Suddi Udaya

ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಅನ್ನದಾನ ಹಾಗೂ ದಾನಿಗಳಿಂದ ಸಿಹಿ ತಿಂಡಿ ಮತ್ತು ಪಾನೀಯ, ಮೊಟ್ಟೆ ವಿತರಣೆ

Suddi Udaya

ಚಿನ್ನದ ಕರಿಮಣಿ ಸರ ಕಳ್ಳತನ ಪ್ರಕರಣ ಆರೋಪಿ ಉಮೇಶ್ ಗೌಡ ಅಪರಾಧಿಯೆಂದು ತೀರ್ಪು ನೀಡಿದ ನ್ಯಾಯಾಲಯ

Suddi Udaya

ಲೇಖಕಿ ಶ್ವೇತಾ ದಿಲೀಪ್ ರವರ ಕೃತಿ “ಜೀವನದ ಬೆಳಕು” ಪುಸ್ತಕ ಬಿಡುಗಡೆ

Suddi Udaya

ಇಂದು(ಜ.6): ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಸಮುದ್ರ ಮಥನ ಸೇವೆಯಾಟ : ಶ್ರೀ ಮಹಾಗಣಪತಿ ದೇವರಿಗೆ “ಮೂಡಪ್ಪ ಸೇವೆ”

Suddi Udaya

ಬೆಳ್ತಂಗಡಿಯ ಹಲವು ಕಡೆ ಆಲಿಕಲ್ಲು ಮಳೆ

Suddi Udaya
error: Content is protected !!