September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಸ್ಕತ್ ಗೆ ತುಳುನಾಡಿನ ಕಿರೀಟ: ಈ ವರ್ಷದ ಉತ್ತಮ ತುಳು ಚಲನಚಿತ್ರ ದಸ್ಕತ್

ಬೆಳ್ತಂಗಡಿ: ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಭವನದಲ್ಲಿ ನಡೆದ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ 2025 ನಲ್ಲಿ ದಸ್ಕತ್ ಸಿನೆಮಾವು ಈ ವರ್ಷದ ಉತ್ತಮ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.


ಇದೆ ಸಿನೆಮಾದ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಉತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ಉತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಹಾಗೂ ಸಂತೋಷ್ ಆಚಾರ್ಯ ಗುಂಪಲಾಜೆ ಉತ್ತಮ ಛಾಯಾಗ್ರಾಹಕ, ದೀಕ್ಷಿತ್ ಕೆ ಪೂಜಾರಿ ಉತ್ತಮ ನಟ, ಯುವ ಶೆಟ್ಟಿ ಉತ್ತಮ ಖಳ ನಟ, ಸಮರ್ಥನ್ ರಾವ್ ಉತ್ತಮ ಹಿನ್ನೆಲೆ ಸಂಗೀತ, ಉತ್ತಮ ಪೋಷಕ ನಟ ಮೋಹನ್ ಶೇಣಿ ಹೀಗೆ ಒಟ್ಟು 8 ಪ್ರಶಸ್ತಿಗಳನ್ನು ದಸ್ಕತ್ ಸಿನೆಮಾ ತಂಡ ಮುಡಿಗೇರಿಸಿದೆ.


ಈ ಸಿನೆಮಾ ತುಳುವಿನಲ್ಲಿ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆದೊಂದಿಗೆ ಇದೀಗ ಕನ್ನಡಕ್ಕೆ ಅನುವಾದಗೊಂಡು ಬಿಡುಗಡೆ ಗೊಂಡ ಮೊದಲ ತುಳು ಸಿನೆಮಾ ಅನ್ನೋ ಇತಿಹಾಸ ನಿರ್ಮಿಸಿದೆ.
ಈ ಸಿನೆಮಾಕ್ಕೆ ಇನ್ನಷ್ಟು ಪ್ರಶಸ್ತಿಗಳು ಲಭಿಸಲಿ ನಮ್ಮ ತುಳು ಸಿನೆಮಾಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅನ್ನೋದೇ ನಮ್ಮ ಆಶಯ.

Related posts

ಕೊಕ್ರಾಡಿ: ಹೇರ್ದಂಡಿ ಬಾಕ್ಯಾರು ಗರಡಿಗೆ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಭೇಟಿ,

Suddi Udaya

ಸ.ಹಿ.ಪ್ರಾ.ಶಾಲೆ ಕುಂಟಾಲಪಲ್ಕೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಬೇಸಿಗೆ ಶಿಬಿರ

Suddi Udaya

ಎ.2: ಬಿಜೆಪಿ ಬೆಳ್ತಂಗಡಿ ಮಂಡಲ ಪದಾಧಿಕಾರಿಗಳ, ವಿವಿಧ ಮೋರ್ಚಾಗಳ, ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ ಹಾಗೂ ಬೂತ್ ಸಮಿತಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶ

Suddi Udaya

ಮಾಲಾಡಿ: ವಿದ್ಯುತ್ ಶಾರ್ಟ್ ನಿಂದ ಮನೆಯಲ್ಲಿ ಬೆಂಕಿ: ಸೋತ್ತುಗಳು ಬೆಂಕಿಗಾಹುತಿ

Suddi Udaya

ಫೆ.15-22: ಕೊರಿಂಜ ಪಂಚಲಿಂಗೇಶ್ವರ ದೇವರ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ದೈವಗಳ ಪ್ರತಿಷ್ಠೆ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ, ದೇವಗಳ ನೇಮೋತ್ಸವ

Suddi Udaya
error: Content is protected !!