September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಕ್ಕಡ ಜಂಕ್ಷನ್ ಹದಗೆಟ್ಟ ರಸ್ತೆ: ದುರಸ್ತಿಗೆ ಆಗ್ರಹಿಸಿ ರಸ್ತೆ ಮಧ್ಯ ಬಾಳೆ ಗಿಡ ನೆಟ್ಟು ಎಚ್ಚರಿಕೆ

ಕೊಕ್ಕಡ: ಧರ್ಮಸ್ಥಳ ಸುಬ್ರಮಣ್ಯ ರಸ್ತೆಯ ಕೊಕ್ಕಡ ಜಂಕ್ಷನ್ ಬಳಿ ರಸ್ತೆ  ಮಧ್ಯದಲ್ಲಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆಯು ರಾಜ್ಯ ರಸ್ತೆಯಾಗಿದ್ದು , ಒಂದೊಂದು ಗುಂಡಿ 1 ಅಡಿ ಇದ್ದು ವಾಹನ ಸವಾರರು ನರಕ ಯಾತನೆ ಅನುಭವಿಸುವಂತಾಗಿದೆ.   ದ್ವಿಚಕ್ರ ವಾಹನ ಸವಾರರಿಗೆ ಈ ಗುಂಡಿ ಮರಣದ ಸಂಕೇತವನ್ನು ಆಹ್ವಾನಿಸಿದಂತೆ  ಇದೆ . ಇದನ್ನು ಮನಗಂಡು ಮುಂದಕ್ಕೆ ಆಗುವ ಅಪಾಯಕ್ಕೆ ಮುನ್ಸೂಚನೆಯಂತೆ ರಸ್ತೆ ಗುಂಡಿಯಲ್ಲಿ ಸ್ಥಳೀಯರು ಬಾಳೆ ಗಿಡ ನೆಟ್ಟು ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ. ಈ ಬಗ್ಗೆ ಸಂಬಂಧಪಟ್ಟರು ಗಮನ ಹರಿಸಿ ಮುಂದಕ್ಕೆ ಆಗುವ ಅನಾಹುತವನ್ನು ತಪ್ಪಿಸುವಂತೆ ಸ್ಥಳೀಯರ ಒತ್ತಾಯವಾಗಿದೆ.

Related posts

ಪಶುಪರಿವೀಕ್ಷಕ ಹಲ್ಲೆ ಆರೋಪ; ಪಟ್ರಮೆಯ ನಿವಾಸಿ ಕುಸಿದು ಬಿದ್ದು ಮೃತ್ಯು

Suddi Udaya

ಜಾರಿಗೆಬೈಲು ಸಮೀಪದಲ್ಲಿ ಚರಂಡಿಗೆ ಕಾರು ಪಲ್ಟಿ, ಚಾಲಕನ ಸ್ಥಿತಿ ಗಂಬೀರ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಬೆಂಗಳೂರು ಭುವನೇಶ್ವರಿ ಕ್ಯಾಟರರ್ಸ್ ಜೆಬಿಆರ್ ಎಂಟರ್ ಪ್ರೈಶಸ್ ರವರಿಂದ ದೇವರಿಗೆ ವಿಶೇಷ ಹೂವಿನ ಅಲಂಕಾರ

Suddi Udaya

ಬೆಂದ್ರಾಳ ಸೈಂಟ್ ಸಾವಿಯೋ ಶಾಲಾ ಪ್ರಾರಂಭೋತ್ಸವ

Suddi Udaya

ನಾರಾವಿ ಉ.ಪ್ರಾಥಮಿಕ ಶಾಲೆ: ಪುಸ್ತಕ ವಿತರಣೆ

Suddi Udaya

ಕಾಳುಮೆಣಸು ಬೆಳೆಯುವ ರೈತರಿಗೆ ಸುವರ್ಣಾವಕಾಶ: ಕರಾವಳಿ ಆಗ್ರೋ ಸೆಂಟರ್ & ಪ್ಲಾಂಟೇಶನ್ ನಲ್ಲಿ ಉತ್ತಮ ತಳಿಯ ಹೈಬ್ರಿಡ್ ಕಾಳುಮೆಣಸು ಸಸಿಗಳು ಲಭ್ಯ

Suddi Udaya
error: Content is protected !!