ಕಾಶಿಪಟ್ಣ: ಮನೆಯಿಂದ ಹೋದವರು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಶಿಪಟ್ಣದ ಶ್ರೀದೇವಿ ಪ್ರಸಾದ್ ನಿಲಯದ ರವೀಂದ್ರ ಅಚಾರ್ಯ(47) ರವರ ಪತ್ನಿ ಜ್ಯೋತಿ ರವರ ದೂರಿನಂತೆ ರವೀಂದ್ರ ಅಚಾರ್ಯ ರವರು ಚಿನ್ನ ಮತ್ತು ಬೆಳ್ಳಿಯ ಕಸೂತಿ ಕೆಲಸ ಮಾಡುತ್ತಿದ್ದು ಜೂ.28 ರಂದು ಬೆಳಿಗ್ಗೆ ಮನೆಯಿಂದ ಹೋದವರು ರಾತ್ರಿಯಾದರೂ ಮನೆಗೆ ಬಾರದೆ ಕಾಣೆಯಾಗಿದ್ದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಈ ತನಕ ಪತ್ತೆಯಾಗಿರುವುದಿಲ್ಲ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.











