ತೆಂಕಕಾರಂದೂರು : ಇಲ್ಲಿಯ ಗುಂಡ್ಯೇರಿ ಎಂಬಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತವಾದ ಘಟನೆ ಜು. 10ರಂದು ನಡೆದಿದೆ.
ಗುಂಡ್ಯೇರಿ- ಕರಂಬಾರು ಸಾರ್ವಜನಿಕ ರಸ್ತೆಯಲ್ಲಿ ಕಾರಿನ ಚಾಲಕ ಶೇಖರ್ ರವರು ಗುಂಡ್ಯೇರಿ ಕಡೆಯಿಂದ ಕರಂಬಾರು ಕಡೆಗೆ ದುಡುಕುತನದಿಂದ ಹಾಗೂ ನಿರ್ಲಕ್ಷತನದಿಂದ ತಿರುವು ರಸ್ತೆಯಲ್ಲಿ ರಾಂಗ್ ಸೈಡಿಗೆ ಚಲಾಯಿಸಿ ಎದುರಿನಿಂದ ಅಂದರೆ ಕರಂಬಾರು ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಂಜೀವ ಮೂಲ್ಯ(62) ರವರು ದ್ವಿಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ಕಾಲು ಮುರಿತದ ಗಾಯ ಉಂಟಾಗಿ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತರೆ ಎಂದು ವೇಣೂರು ಪೊಲೀಸ್ ಠಾಣೆಗೆ ದೂರಿನಲ್ಲಿ ತಿಳಿಸಿರುತ್ತಾರೆ.











