25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ- ಕಾರ್ಯತಡ್ಕ- ಪಾದೆ- ಅರಸಿನಮಕ್ಕಿ -ಶಿಶಿಲ ಮಾರ್ಗವಾಗಿ ಸರ್ಕಾರಿ ಬಸ್ ಸಂಚಾರ ಮರು ಪ್ರಾರಂಭಿಸುವಂತೆ ಕಳೆಂಜ ಕಾಂಗ್ರೆಸ್ ಗ್ರಾಮ ಸಮಿತಿಯಿಂದ ಮನವಿ

ಧರ್ಮಸ್ಥಳ – ಕಾರ್ಯಾತಡ್ಕ – ಶಿಶಿಲ ರೂಟ್ ಬಸ್ ಹಾಗೂ ಕಾರ್ಯಾತಡ್ಕ – ಶಿಬರಾಜೆ ಪಾದೆ – ಮುದ್ದಿಗೆ -ಕೊಕ್ಕಡ -ಉಪ್ಪಿನಂಗಡಿ -ಪುತ್ತೂರು ಹೊಸದಾಗಿ ರೂಟ್ ಬಸ್ ಪ್ರಾರಂಬಿಸುವಂತೆ ಜು. 11 ರಂದು ಕಳೆಂಜ ಕಾಂಗ್ರೆಸ್ ಗ್ರಾಮ ಸಮಿತಿಯವರು ಧರ್ಮಸ್ಥಳ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಲಾಯಿತು.

ಈ ಮಾರ್ಗದಲ್ಲಿ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಹಾಗೂ ಅನೇಕ ಉದ್ಯೋಗಸ್ಥರು, ಸಾರ್ವಜನಿಕರು ಪ್ರಯಾಣ ಮಾಡುತ್ತಿದ್ದು ಖಾಸಗಿ ಬಸ್ ಹಾಗೂ ಇನ್ನಿತ್ತರ ವಾಹನಗಳನ್ನು ಅವಲಂಬಿತರಾಗಿದ್ದಾರೆ. ಸದರಿ ಮಾರ್ಗಕ್ಕೆ ಬೆಳಿಗ್ಗೆ ಮತ್ತು ಮದ್ಯಾಹ್ನ ಹಾಗೂ ಸಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆಯನ್ನು ಕಲ್ಪಿಸಿಕೊಡುವಂತೆ ಈ ಮೂಲಕ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಪಿ ಟಿ ಸೆಬಾಸ್ಟಿನ್ , ಗ್ರಾಮ ಪಂಚಾಯತ್ ಸದಸ್ಯರಾದ ನಿತ್ಯಾನಂದ ರೈ , ಪ್ರೇಮ ಬಿ ಎಸ್. ಮತ್ತು ಊರ ಪ್ರಮುಖರಾದ ಶ್ರೀಧರ್ ರಾವ್, ಶರತ್ ಮೂಡಾರು, ಅಶೋಕ್ ಭಟ್ ಕಾಯಡ, ಜಯವರ್ಮ ಜೈನ್ ಶಿಬರಾಜೆ, ಕೇಶವ ಗೌಡ ಮಲ್ಲಜಾಲು ಉಪಸ್ಥಿತರಿದ್ದರು.

Related posts

ಓಡಿಲ್ನಾಳ: ವಲೇರಿಯನ್ ಪಾಯಸ್ ನಿಧನ

Suddi Udaya

ಬ್ರಹ್ಮವಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ವಿಚಾರಣೆಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರು

Suddi Udaya

ಜು.6 : ಬೆಳ್ತಂಗಡಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಎರಡನೇ ವರ್ಷದ ಶ್ರೀ ಗಣೇಶೋತ್ಸವ

Suddi Udaya

ಭಕ್ತಿ ಪಾರಮ್ಯಕ್ಕೆ ಅಣಿಯಾದ ಮಲೆಂಗಲ್ಲು ಬ್ರಹ್ಮಕಲಶೋತ್ಸವ

Suddi Udaya

ಕೊಕ್ಕಡ ಅಮೃತ ಗ್ರಾಮ ಪಂಚಾಯತ್ ವತಿಯಿಂದ ಶಾಸಕರಿಗೆ ಅಭಿನಂದನೆ

Suddi Udaya
error: Content is protected !!