ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಹುಣ್ಣಿಮೆ ಪ್ರಯುಕ್ತ ನಡೆಯುವ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆಯು ಜು.10 ರಂದು ಶ್ರೀ ರಾಘವೇಂದ್ರ ಬಾಂಗೀಣ್ಣಾಯ ಕುಂಟಿನಿ ಇವರ ಪೌರೋಹಿತ್ಯದಲ್ಲಿ ಪ್ರಾರಂಭಗೊಂಡು ರಾತ್ರಿ
ಮಹಾ ಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು.
ನಂತರ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪಿತಾಂಬರ ಹೇರಾಜೆಯವರು ಆ. 10 ರಿಂದ 13 ರವರೆಗೆ ರಾಯರ ಮಠದಲ್ಲಿ ನಡೆಯುವ 354ನೇ ಆರಾಧನಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಕಾರ್ಯದರ್ಶಿ ವಸಂತ ಸುವರ್ಣ, ಕೋಶಾಧಿಕಾರಿ ಶ್ರವಣ್ ರಾಜ್, ಟ್ರಸ್ಟಿಗಳಾದ ಪ್ರೊ. ಎ ಕೃಷ್ಣಪ್ಪ ಪೂಜಾರಿ, ಸೋಮೇಗೌಡ, ಜಯರಾಮ ಬಂಗೇರ, ಶ್ರೀಮತಿ ಸುಜಿತಾ ವಿ ಬಂಗೇರ, ಶ್ರೀಮತಿ ಸುಶೀಲ ಹೆಗ್ಡೆ, ಮುಖ್ಯ ಅರ್ಚಕ ಶ್ರೀ ರಾಘವೇಂದ್ರ ಬಾಂಗೀಣ್ಣಾಯ, ಕೃಷ್ಣ ಶೆಟ್ಟಿ, , ವಿಟ್ಟಲ್ ಶೆಟ್ಟಿ ಪದ್ಮ ಕುಮಾರ್ ಸುರೇಶ್ ಶೆಟ್ಟಿ, ಹರೀಶ್ ನಾಯ್ಕ್, ಶ್ರೀಮತಿ ವಾರಿಜ ಸುವರ್ಣ, ಶ್ರೀಮತಿ ಸೌಮ್ಯ ಲಾಯಿಲ, ಸವಿತಾ ಪ್ರಕಾಶ್, ಸುಜಾತ ಬಂಗೇರ, ದೀಪಕ್ ಸಿರಿ ಶ್ರೀಮತಿ ಶಾಂಭವಿ ಬಂಗೇರ ಉಪಸ್ಥಿತರಿದ್ದರು.











