July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಡೈನಮಿಕ್ ಡ್ಯಾನ್ಸ್ ಫ್ಯಾಕ್ಟರಿ & ಕಾಸ್ಟ್ಯೂಮ್ ಕಾರ್ನರ್ ಶುಭಾರಂಭ

ಉಜಿರೆ: ಇಲ್ಲಿಯ ಮಲ್ಲಿಕಾರ್ಜುನ ಕಾಂಪ್ಲೆಕ್ಸ್‌ನಲ್ಲಿ ನೃತ್ಯ ಸಂಯೋಜಕರಾದ ವಿನ್ಯಾಸ್ ಭಂಡಾರಿ & ಭರತ್ ಉಜಿರೆ ಮಾಲಕತ್ವದ ಡೈನಮಿಕ್ ಡ್ಯಾನ್ಸ್ ಫ್ಯಾಕ್ಟರಿ & ಕಾಸ್ಟ್ಯೂಮ್ ಜು.14ರಂದು ಶುಭಾರಂಭಗೊಂಡಿತು.

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ರಿಬ್ಬನ್ ಕತ್ತರಿಸುವ ಮೂಲಕ ಶುಭಾರಂಭಗೊಳಿಸಿದರು.

ಉದ್ಯಮಿ ಕೆ. ಮೋಹನ್ ಕುಮಾರ್, ಲಕ್ಷ್ಮೀ ಇಂಡಸ್ಟ್ರೀಸ್, ಕನಸಿನ ಮನೆ ಉಜಿರೆ ದೀಪ ಪ್ರಜ್ವಲನೆಗೊಳಿಸಿದರು.

ವೇದಿಕೆಯಲ್ಲಿ ವಕೀಲರು ಧನಂಜಯ್ ರಾವ್, ಉದ್ಯಮಿ ರಾಜೇಶ್ ಪೈ, ಸುರೇಶ್ ಬಂಗೇರ, ಗಣೇಶ್ ಗೌಡ ನಾವೂರು, ಡಿ. ಎಂ. ಗೌಡ, ವಿನ್ಯಾಸ್ ಭಂಡಾರಿ & ಭರತ್ ರವರ ಪೋಷಕರು ಉಪಸ್ಥಿತರಿದ್ದರು.

ನೃತ್ಯ ಸಂಯೋಜಕರಾದ ಉಜಿರೆಯ ಕೃಷ್ಣ ಕುಮಾರ್ & ಉದಯ್ ಎ.ಕೆ. ರವರನ್ನು ಸನ್ಮಾನಿಸಲಾಯಿತು. ಡೈನಮಿಕ್ ಡ್ಯಾನ್ಸ್ ಫ್ಯಾಕ್ಟರಿಯ ಕೊಠಡಿ ವಿನ್ಯಾಸಕ ಶಾಮಿನ್ ಕುಮಾರ್ ರವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವ್ಯಾಯಾಯಂ ಜಿಮ್ ನ ಶಿಶಿರ್, ಉಮೇಶ್, ಪ್ರವೀಣ್ ವಸಂತ್, ಗಣೇಶ್, ಡೈನಮಿಕ್ ಡ್ಯಾನ್ಸ್ ಫ್ಯಾಕ್ಟರಿ ಯ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಖ್ಯಾತ ನಿರೂಪಕಿ ಕೀರ್ತಿ ನಿರೂಪಿಸಿದರು. ವಿನ್ಯಾಸ್ ಭಂಡಾರಿ ವಂದಿಸಿದರು.

Related posts

ಶ್ರೀ ಕ್ಷೇ.ಧ.ಗ್ರಾ.ಯೋಜನೆ ಹಾಗೂ ಪಾಲೇದು ಸ. ಹಿ. ಪ್ರಾ. ಶಾಲೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ

Suddi Udaya

ಲಾಯಿಲದ ಹೊಸಕುಮೇರು ನಿವಾಸಿ ಯುವತಿ ಮಂಗಳೂರಿನಲ್ಲಿ ಆತ್ಮಹತ್ಯೆ

Suddi Udaya

ನಾರಾವಿ ಅರಸು ಕಟ್ಟೆಯಲ್ಲಿ ಗೂಡ್ಸ್ ಟೆಂಪೋ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಜೋಕಿ ರೋಡ್ರಿಗಸ್‌ ಸ್ಥಳದಲ್ಲೇ ಸಾವು

Suddi Udaya

ನ. 26: ಮಲೆಬೆಟ್ಟು ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ಷಷ್ಠಿ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಜು. 24 ರಿಂದ ಮುಳಿಯ ಮಾನ್ಸೂನ್ ಧಮಾಕ: ಮುಂಗಾರಿನ ಸಂಭ್ರಮವನ್ನು ಇಮ್ಮಡಿಗೊಳಿಸಲು ಗ್ರಾಹಕರಿಗೆ ಆಕರ್ಷಕ ರಿಯಾಯಿತಿ: ಆ. 5 ಮುಳಿಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ,ಗ್ರಾಹಕರ ಸಮಾಗಮ,

Suddi Udaya

ಫೆ.15-22: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ

Suddi Udaya
error: Content is protected !!