March 7, 2026
ಗ್ರಾಮಾಂತರ ಸುದ್ದಿ

ಪ್ರೌ.ಶಾಲೆ ಗೇರುಕಟ್ಟೆಯಲ್ಲಿ 2024-25ನೇ ಸಾಲಿನ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನ. ಅಲ್ಲದೆ ಮಾದಕವಸ್ತು ದುರುಪಯೋಗ ತಡೆಗಟ್ಟುವಿಕೆ ಮಾಹಿತಿ ಕಾರ್ಯಗಾರ

ಗೇರುಕಟ್ಟೆ:ಜು: 19ರಂದು ಸ.ಪ್ರೌ.ಶಾಲೆ ಗೇರುಕಟ್ಟೆಯಲ್ಲಿ 2024-25ನೇ ಸಾಲಿನ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು

. ಅಲ್ಲದೆ ಮಾದಕವಸ್ತು ದುರುಪಯೋಗ ತಡೆಗಟ್ಟುವಿಕೆ ಬಗ್ಗೆ ಆರಕ್ಷಕ ಠಾಣಾಧಿಕಾರಿ(ASI) ಗಳಾದ ಕುಶಾಲಪ್ಪ ಎಂ. ಇವರಿಂದ ಮಾಹಿತಿ ಕಾರ್ಯಾಗಾರ ನಡೆಯಿತು. ಕುಶಾಲಪ್ಪ ಇವರು ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳು, ಇವುಗಳಿಂದ ದೂರವಿರಲು ಮಾರ್ಗೋಪಾಯಗಳು ಹಾಗೂ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕರಾದ ಈಶ್ವರಿ ಕೆ. ಇವರು ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ 2025-26ನೇ ಶೈಕ್ಷಣಿಕ ವರ್ಷದ ಪಠ್ಯಕ್ರಮ, ಪರೀಕ್ಷಾ ಮಾಹಿತಿ ಹಾಗೂ ಮಾದಕ ವಸ್ತು ಸೇವನೆ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ತರಗತಿ ಶಿಕ್ಷಕರಾದ ಜ್ಯೋತಿ ಇವರು 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಕ್ರಿಯಾಯೋಜನೆ, ಅಧ್ಯಯನ ಮಾಡುವ ರೀತಿಯ ಬಗ್ಗೆ ತಿಳಿಸಿದರು. ಶ್ರೀಮತಿ ಮಮತಾ ವಿದ್ಯಾರ್ಥಿಗಳ ‌ಸನ್ಮಾನ ಕಾರ್ಯಕ್ರಮ ನೆರವೇರಿತು. SDMC ಉಪಾಧ್ಯಕ್ಷರಾದ ಗೋಪಾಲಗೌಡ, ಸದಸ್ಯರಾದ ಜಯಂತಿ ಹಾಗೂ ಪ್ರೇಮ ಕಾರ್ಯಕ್ರಮ ನಡೆಸಿಕೊಟ್ಟರು . ದಿನೇಶ್ ಕಾರ್ಯಕ್ರಮನಿರೂಪಿಸಿ. ರಮ್ಯಾ ಸ್ವಾಗತಿಸಿದರು.ಶ್ರೀ ಕೆಂಚ ವೀರಪ್ಪ ಧನ್ಯವಾದವಿತ್ತರು. . ಶಿಕ್ಷಕರಾದ ಅಜಿತಕುಮಾರ್ ಶೈಲಜ, ಅಭಿಷೇಕ್, ಕಛೇರಿ ಸಹಾಯಕರಾದ ಶಿವಶಂಕರ್ ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ಲಾಯಿಲ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಗಣೇಶ್ ಕನ್ನಾಜೆ ಆಯ್ಕೆ

Suddi Udaya

ಉಜಿರೆ ಶ್ರೀ ಸರಸ್ವತಿ ಭಜನಾ ಮಂದಿರಕ್ಕೆ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಭೇಟಿ

Suddi Udaya

ಎಸ್ ಡಿ ಎಂ, ಆರ್ ಸಿ ಸಿ, ರೋಟೊ, ಲಾಯರ್ಸ್ ಇಂಟರ್ ನ್ಯಾಷನಲ್ ಚೆಸ್ ಕಪ್- ಸಮಾರೋಪ ಸಮಾರಂಭ

Suddi Udaya

ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ ದಕ್ಷಿಣ ಮಧ್ಯವಲಯ ಉಪಾಧ್ಯಕ್ಷರಾಗಿ ಧರ್ಮಸ್ಥಳದ ಎ. ಎಸ್. ಲೋಕೇಶ್ ಶೆಟ್ಟಿ ಆಯ್ಕೆ

Suddi Udaya

ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿಯ ವತಿಯಿಂದ ಸಿನಿಮಾ , ಧಾರವಾಹಿ , ರಂಗಭೂಮಿಯಲ್ಲಿ ವಿಶೇಷ ಸಾಧನೆಗೈದ ಪ್ರಕಾಶ್ ಸವಣಾಲು ರವರಿಗೆ ಕಲಾರತ್ನ ಪ್ರಶಸ್ತಿ

Suddi Udaya

ಪಡಂಗಡಿಯ ಮನೆಯೊಂದರಿಂದ ರೂ.25 ಸಾವಿರ ನಗದು ಹಾಗೂ ರೂ.9.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya
error: Content is protected !!