ಪೆರಾಡಿ :ಬಂಟರ ಸಂಘ (ರಿ.)ಬೆಳ್ತಂಗಡಿ
ಬಂಟರ ಗ್ರಾಮ ಸಮಿತಿ ಪೆರಾಡಿ ಇದರ ಸರ್ವ ಸದಸ್ಯರ ಕುಟುಂಬ ಮಿಲನ ಕಾರ್ಯಕ್ರಮ ಜು 20 ಎಂ. ಎಸ್ ಕಪೌಂಡ್ ಪೆರಾಡಿಯಲ್ಲಿ ಸಂಜೀವ ಶೆಟ್ಟಿ ಪೆರಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಬೆಳ್ತಂಗಡಿ ತಾಲೂಕು ಸಮಿತಿಯ ಯುವ ಜೊತೆ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ನಿರ್ದೇಶಕರು ನಾರಾಯಣ ಶೆಟ್ಟಿ ಬಂಟರ ಸಂಘಟನೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಬೆಳ್ತಂಗಡಿ ತಾಲೂಕು ನಿರ್ದೇಶಕರಾದ ರವಿ ಶೆಟ್ಟಿ ,ಗ್ರಾಮ ಸಮಿತಿಯ ಬಗ್ಗೆ ಮಾಹಿತಿ ನೀಡಿದರು.ಮಾಜಿ ಅಧ್ನಕ್ಷಕರಾದ ಸದಾನಂದ ಶೆಟ್ಟಿ ಮಾತನಾಡಿದರು.ವೇದಿಕೆಯಲ್ಲಿ ಕಾಶಿ ಪಟ್ಟಣ ಗ್ರಾಮ ಸಮೀತಿಯ ಅಧಕ್ಷಸತೀಶ್ ಶೆಟ್ಟಿ, ಸುಲ್ಕೆರಿ ಗ್ರಾಮ ಸಮಿತಿ ಅಧಕ್ಷ ಮಹಾಬಲ ಶೆಟ್ಟಿ, ಪೆರಾಡಿ ಸಿ ಎ ಬ್ಯಾಂಕ್ ನಿರ್ದೇಶಕರಾ ದ ದೇವಕಿ ಶೆಟ್ಟಿ ಉಪಸ್ಥಿತರಿದ್ದರು. ಸುಮಾರು 9 ಬಂಟ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ. ನಾರಾವಿ ವಲಯ ಸಮೀತಿ ಅಧಕ್ಷ ರಾಜೇಶ್ ಎನ್ ಶೆಟ್ಟಿ ಸ್ವಾಗತಿಸಿ ನಾರಾಯಣ್ ಶೆಟ್ಟಿ ನಿರೂಪಿಸಿ ಕಾರ್ಯಧರ್ಶಿ ರಕ್ಷಿತ್ ಶೆಟ್ಟಿ ವಂದಿಸಿದರು..







