ಬೆಳ್ತಂಗಡಿ : ಬಿಎಂಎಸ್ ರಿಕ್ಷಾ ಚಾಲಕರ ಸಂಘ ಬೆಳ್ತಂಗಡಿ ತಾಲೂಕು ಇದರ ರಿಕ್ಷಾ ಚಾಲಕರ ಆಪತ್ಕಾಲದ ಕ್ಷೇಮ ನಿಧಿ ಯೋಜನೆಯ 30 ನೇ ಸಹಾಯಧನ ರೂ.3000/ವನ್ನು ಆಟೋ ಚಾಲಕ ಮಾಲಕರ ಸಂಘ ಸುರಿಯ ಉಜಿರೆ ಇದರ ಸದಸ್ಯ ಶ್ರೀನಿವಾಸ್ ಗೌಡ ರವರು ಹೃದಯ ಸಂಬಂಧಿ ಕಾಯಿಲೆಯಿಂದ ತಾರಾ ಹಾಸ್ಪಿಟಲ್ ಮಂಗಳೂರು. ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ ಇವರಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ನಯ್ಯ ಗೌಡ ಸಹಾಯಧನ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ದಿನೇಶ್ ಗೌಡ, ಶೇಖರ್ ಗೌಡ , ರಾಘವ ಗೌಡ ಉಪಸ್ಥಿತರಿದ್ದರು.











