ಗೇರುಕಟ್ಟೆ: ದಿನ ನಿತ್ಯ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ವಿಧ್ಯಾಭ್ಯಾಸದ ಅನುಕೂಲಕ್ಕಾಗಿ ಬೆಳ್ತಂಗಡಿಯಿಂದ ಹೊರಟು ಕೊಯ್ಯೂರು, ಗೇರುಕಟ್ಟೆ ಹುಣ್ಸೆಕಟ್ಟೆ ಮೂಲಕ ಬೆಳ್ತಂಗಡಿ ಕೆ.ಇ.ಬಿ. ರೋಡ್ ಸರಕಾರಿ ಬಸ್ಸು ವ್ಯವಸ್ಥೆಯ ಕಲ್ಪಿಸುವಂತೆ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೊಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಗೌಡ ಪಾಂಬೇಲು, ಇಸುಬು ಉಣ್ಣಾಲು ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಗೌಡ ಕೊಯ್ಯೂರು, ಸಮಾಜ ಸೇವಕ ಸಲೀಂ ಪಾತ್ರಾಳ, ಯೂಸುಫ್ ಕೊಯ್ಯೂರು, ಹಮೀದ್ ಜಿ.ಡಿ. ಗೇರುಕಟ್ಟೆ ,ಅಬ್ದುಲ್ ರಜಾಕ್ , ಅಬುಬ್ಬಕ್ಕರ್ ಗೇರುಕಟ್ಟೆ, ಕೊಯ್ಯೂರು ಸೇವಾ ಸಹಕಾರಿ ಬ್ಯಾಂಕು ನಿರ್ದೇಶಕ ಯತೀಶ ಗೌಡ ದಡ್ಡ್ ಉಪಸ್ಥಿತರಿದ್ದರು. .











