ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಆರರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನಃಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಪದ್ಮಶ್ರೀ ಜೈನ್ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿ ಆರೋಗ್ಯಕರ ಕುಟುಂಬದಲ್ಲಿ ಮಗು ಹೇಗೆ ಸಂತೋಷವಾಗಿ ಬೆಳೆಯುತ್ತದೆ ಎಂಬುದನ್ನು ವಿವರಿಸಿದರು.
ಹೆತ್ತವರ ವಿವಿಧ ಬಗೆಗಳು ,ವಿದ್ಯಾರ್ಥಿಗಳು ಹೇಗೆ ಇರುತ್ತಾರೆ, ಹೆತ್ತವರ ಜವಾಬ್ದಾರಿಯನ್ನು ಹಲವಾರು ನೈಜ ಉದಾಹರಣೆಗಳನ್ನು ನೀಡುತ್ತಾ ಹೆತ್ತವರ ಜೊತೆಗೆ ಸಂವಾದವನ್ನು ನಡೆಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಶಾಲಾ ರೀತಿ ನೀತಿಗಳ ಕುರಿತು ,ಮಾದಕ ವ್ಯಸನಿಗಳ ಕುರಿತು ಅದರ ಜಾಗೃತಿ ಕುರಿತು,ಹೊಸ ಪರೀಕ್ಷಾ ವಿಧಾನಗಳನ್ನು ಕುರಿತು ವಿವರಿಸಿದರು. ಶಾಲಾ ಸಹಶಿಕ್ಷಕಿ ಶ್ರೀಮತಿ ಕಾವ್ಯ ಕಾರ್ಯಕ್ರಮ ನಿರೂಪಿಸಿದರು.











