ಗುರುವಾಯನಕೆರೆ: ಗುರುವಾಯನಕೆರೆ ಭೂಷಣ್ ಬಾರ್ ಇದರ ಮಾಲಕ ಭಾಸ್ಕರ್ ಶೆಟ್ಟಿ (75ವ) ಅವರು ಫೆ.1ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗುರುವಾಯನಕೆರೆಯಲ್ಲಿ ಸುಮಾರು 35 ವರ್ಷಗಳಿಂದ ಭೂಷಣ್ ಬಾರ್& ರೆಸ್ಟೋರೆಂಟನ್ನು ನಡೆಸಿಕೊಂಡು ಬರುತ್ತಿದ್ದ ಇವರು ಬೆಂಗಳೂರಿನ ರಾಜಧಾನಿ ಬಾರ್ & ರೆಸ್ಟೋರೆಂಟ್ನ ಪಾರ್ಟನರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಇವರು ಮೂಲತಃ ಉಡುಪಿಯ ನಿವಾಸಿಯಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ. ಮೃತರು ಪತ್ನಿ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ.













