ನಾವೂರು: ಜು. 24 ರಂದು ಸುರಿದ ಭಾರಿ ಮಳೆಗೆ ನಾವೂರು ಗ್ರಾಮದ ಕೈಕಂಬ ರಸ್ತೆ ಬದಿಯ ಮರ ಕಿಲ್ಲೂರು ರಸ್ತೆ ಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.


ವಿಷಯ ತಿಳಿದ ತಕ್ಷಣ ಗ್ರಾಮ ಪಂಚಾಯತ್ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ , ಹಾಲಿ ಸದಸ್ಯರಾದ ಗಣೇಶ್ ಗೌಡ ನಾವೂರು, ಹಾಗೂ ಸ್ಥಳೀಯರಾದ ಆದಂ ಕೈಕಂಬ, ಲೈನ್ ಮ್ಯಾನ್ ಸುಧಾಕರ್, ಸಂತೋಷ್ ನೆರೋಲ್ದಪಲಿಕೆ ರವರು ಮರವನ್ನು ತೆರವುಗೊಳಿಸಲು ಸಹಕರಿಸಿದರು.











