ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಮತ್ತು ಪ್ರೋಗ್ರಾಮಿಂಗ್ ಆರ್ಟ್ಸ್ ಯುನಿವರ್ಸಿಟಿ ಇವರು 2025 ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ ವಿಧ್ವತ್ ಪೂರ್ವ ಪರೀಕ್ಷೆಯಲ್ಲಿ ಗುರುವಾಯನಕೆರೆಯ ನಿವಾಸಿ ಹಾಗೂ ಶೆಣೈ ರೆಸ್ಟೋರೆಂಟ್ ಇದರ ಮಾಲೀಕ ಪ್ರಕಾಶ್ ಶೆಣೈ ಹಾಗೂ ದೀಪಾ ಶೆಣೈ ದಂಪತಿಯ ಪುತ್ರಿ ಕು. ರಕ್ಷಾ ಶೆಣೈ ಇವರು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಭರತನಾಟ್ಯ ವಿಧ್ವತ್ ಪೂರ್ವ ತರಬೇತಿಯನ್ನು ವಿಧೂಷಿ ಸ್ವಾತಿ ಕಿರಣ್ ಇವರಲ್ಲಿ ಹಾಗೂ ಭರತನಾಟ್ಯ ಜ್ಯೂನಿಯರ್ ಮತ್ತು ಸೀನಿಯರ್ ತರಬೇತಿಯನ್ನು ವಿಧೂಷಿ ವಿದ್ಯಾ ಮನೋಜ್ ಇವರಲ್ಲಿ ಪಡೆದಿರುತ್ತಾರೆ.











