
ಶಿಶಿಲ: ಇಲ್ಲಿಯ ಕಂಚಿನಡ್ಕ ಎಂಬಲ್ಲಿ ಸುಬ್ಬ ಗೌಡ ಎಂಬವರ ತೋಟಕ್ಕೆ ಕಾಡಾನೆ ದಾಳಿ ಮಾಡಿ, ಅಪಾರ ಕೃಷಿ ಹಾನಿ ಮಾಡಿದ್ದು ಸ್ಥಳಕ್ಕೆ ಶಾಸಕ ಹರೀಶ್ ಪೂಂಜ, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಕೊರಗಪ್ಪ ಗೌಡ, ಮಾಜಿ ಅಧ್ಯಕ್ಷ ಸಂದೀಪ್, ಗಣೇಶ್ ಗೌಡ ಹೊಸ್ತೋಟ,, ರಾಧಾಕೃಷ್ಣ ಗುತ್ತು, ಕರುಣಾಕರ ಶಿಶಿಲ, ಹತ್ಯಡ್ಕ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ಕೆ ಸಾಲಿಯಾನ್, ಅರಸಿನಮಕ್ಕಿ ಗ್ರಾ. ಪಂ. ನಿಕಟ ಪೂರ್ವಧ್ಯಕ್ಷ ನವೀನ್ ರೆಖ್ಯಾ, ಇನ್ನಿತರರು ಉಪಸ್ಥಿತರಿದ್ದರು.
ಇದೇ ವೇಳೆ ಗಾಳಿ ಮಳೆಗೆ ಹಾನಿಯಾದ ಗೋಪಾಲಕೃಷ್ಣ ಅಡ್ಡಹಳ್ಳ ಹಾಗೂ ಹರೀಶ್ ಗೌಡ ಅಡ್ಡಹಳ್ಳ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.











