September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಣ್ಣೀರುಪಂತ: ಕಲ್ಲೇರಿ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ.2.26 ಕೋಟಿ ವ್ಯವಹಾರ, ರೂ.5.47 ಲಕ್ಷ ಲಾಭ

ತಣ್ಣೀರುಪಂತ: ಕಲ್ಲೇರಿ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಜು. 25 ರಂದು ತಣ್ಣೀರುಪಂತ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಲಿಂಗಪ್ಪ ನಾಯ್ಕ ವಹಿಸಿ ಮಾತನಾಡಿ ರೂ. 2,26,96,647 (2.26 ಕೋಟಿ ) ವ್ಯವಹಾರ ಮಾಡಿ 547018 (5.47 ಲಕ್ಷ ) ಲಾಭಗಳಿಸಿದೆ ಎಂದರು.


ವಾರ್ಷಿಕ ವರದಿಯನ್ನು ಸಿಬ್ಬಂದಿ ನಿತಿನ್ ಕುಮಾರ್ ಮತ್ತು ಲೆಕ್ಕ ಪತ್ರ ವನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಶೆಟ್ಟಿ ಸಭೆಗೆ ಮಂಡಿಸಿದರು.


ಈ ವೇಳೆ 2024 -25 ನೇ ಸಾಲಿನಲ್ಲಿ ಅತಿ ಹೆಚ್ಚು ವ್ಯವಹಾರ ಮಾಡಿದ ಹತ್ತು ಜನ ಸಂಸ್ಥೆಯ ಸದಸ್ಯರನ್ನು ಮತ್ತು ಸದಸ್ಯರೇತರ 5 ಮಂದಿಯನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಜೋರೋಮ್ ಬ್ರಗ್ಸ್, ವಾಸಪ್ಪ ಗೌಡ., ಮೋನಪ್ಪ ಗೌಡ, ಯೋಗೀಶ್ ಪೂಜಾರಿ, ಸುಬ್ರಹ್ಮಣ್ಯ ರಾವ್, ಮಂಜುನಾಥ್ ಸಾಲಿಯಾನ್, ದಯಾನಂದ. ಪಿ. ಮತ್ತು ಸದಸ್ಯರು ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಪುರಂದರ ಗೌಡ ಎನ್‌. ಸ್ವಾಗತಿಸಿದರು. ನಿರ್ದೇಶಕರಾದ ತಿಮ್ಮಪ್ಪ ಗೌಡ ಧನ್ಯವಾದ ವಿತ್ತರು

Related posts

ಮಾಚಾರು ಕೆಂಪನೊಟ್ಟು ವಿವಾಹಿತ ಮಹಿಳೆ ಶಶಿಕಲಾ ಶವ ಬಾವಿಯಲ್ಲಿ ಪತ್ತೆ : ಹಲವಾರು ಶಂಕೆ : ಬಂಟ್ವಾಳ ಡಿವೈಎಸ್‌ಪಿ, ಸ್ಥಳಕ್ಕೆ ಆಗಮಿಸಿ ತನಿಖೆ

Suddi Udaya

ಜಿಯೋ ಭಾರತ್ 4g ಮೊಬೈಲ್ ಕೇವಲ 999 ಕ್ಕೆ

Suddi Udaya

ಪ್ಲಾಂಟೇಶನ್ ಬೆಳೆಗಳನ್ನು ಗುತ್ತಿಗೆ ನೀಡಲು ಅರ್ಜಿ ಆಹ್ವಾನ: ಜುಲೈ 15 ರವರೆಗೆ ಕಾಲಾವಕಾಶ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಸುರೇಶ್ ವಿ ಅವರಿಗೆ ಸೇವಾ ನಿವೃತ್ತಿ, ಕಾಲೇಜಿನಲ್ಲಿ ಬಿಳ್ಕೋಡುಗೆ ಸಮಾರಂಭ, ಕಾಲೇಜು ಹಾಗೂ ಹಳೆ ವಿದ್ಯಾರ್ಥಿಗಳಿಂದ ಸನ್ಮಾನ

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮತ್ತು ವಾಣಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಜನರ ಬಳಿಗೆ ತಾಲೂಕು ಆಡಳಿತ : ನಾರಾವಿಯಲ್ಲಿ ಶಾಸಕರ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ಆರಂಭ

Suddi Udaya
error: Content is protected !!