ಅರಸಿನಮಕ್ಕಿ : ಇಲ್ಲಿನ ಚೈತನ್ಯ ಮಿತ್ರ ಕಲಾವೃಂದ ಆಶ್ರಯದಲ್ಲಿ ಆಗಸ್ಟ್ 16ರಂದು ಅರಸಿನಮಕ್ಕಿಯಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ನಡೆಯಲಿದ್ದು ಆಮಂತ್ರಣ ಪತ್ರಿಕೆಯನ್ನು ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜರವರು ಬಿಡುಗಡೆಗೊಳಿಸಿದರು. ಸಂಘಟನೆಯ ಪದಾಧಿಕಾರಿಗಳಾದ ವೃಷಾಂಕ್ ಖಾಡಿಲ್ಕರ್, ಗಣೇಶ್ ಪಲಸ್ತಡ್ಕ, ಮುರಳೀಧರ ಶೆಟ್ಟಿಗಾರ್, ಪ್ರೇಮಚಂದ್ರ ಕೆ., ಶ್ರೀಕಾಂತ್ ಕಾಂತ್ರೆಲ್, ಅಭಿನಯ ಭಟ್, ಸುದರ್ಶನ್ ಗೌಡ ಉಪಸ್ಥಿತರಿದ್ದರು.







