ಬಂದಾರು :ಬೆಳ್ತಂಗಡಿ ತಾಲೂಕು ಶಾಮಿಯಾನ ಮಾಲಕರ ಸಂಘ (ರಿ.) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ) ಇದರ ಜಂಟಿ ಆಶ್ರಯದಲ್ಲಿ ಜುಲೈ 27 ರಂದು ಗದ್ದೆ ಮನೆ ಪಿಲಿಚಾಮುಂಡಿ ಕಲ್ಲು, ಗುರುವಾಯನಕೆರೆ ಗದ್ದೆಯಲ್ಲಿ ಸಂಘದ ಮಾಲಕರು ಮತ್ತು ಕಾರ್ಮಿಕರಿಗೆ ನಡೆದ ಕೆಸರ್ ದ ಕೂಟ-2025, ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಗ್ರಾಮ ಮೈರೋಳ್ತಡ್ಕ-ಶಿವನಗರ ಶ್ರೀ ಸದಾಶಿವ ಶಾಮಿಯಾನ ಸರ್ವಿಸಸ್ ತಂಡ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ತಣ್ಣದಾಗಿಸಿಕೊಂಡಿತು.

ಈ ತಂಡದಲ್ಲಿ ಜಯಪ್ರಕಾಶ್ ಮೈರೋಳ್ತಡ್ಕ, ಸುಂದರ ಅನಾಬೆ, ದೀಕ್ಷಿತ್ ಮೈರೋಳ್ತಡ್ಕ,ಕಾರ್ತಿಕ್ ಖಂಡಿಗ, ಸಂತೋಷ್ ಮುಂಡೂರು,ನಂದನ್ ಮುಂಡೂರು, ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಲಕರಾದ ಪ್ರಶಾಂತ್ ಗೌಡ ನಿರುoಬುಡ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಶೇಖರ ಗೌಡ ಚಾಕೋಟೆದಡಿ, ಲೋಹಿತ್ ಬೋಲೋಡಿ ಉಪಸ್ಥಿತರಿದ್ದರು.











